ಈಗಿನಂತೆಯೇ ಮುಂದಿನ ದಿನಗಳಲ್ಲಿ ಅಚ್ಚುಕಟ್ಟಾಗಿ ಕಾರ್ಯಕ್ರಮ ನಡೆಸಿಕೊಂಡು ಹೋಗಲು ಮೇಲ್ವಿಚಾರಣಾ ಸಮಿತಿ ರಚಿಸಲಾಗುತ್ತಿದ್ದು, ಸಮಿತಿಗೆ ಹೆಸರುಗಳನ್ನು ನೀವೆ ಕೊಡಿ ಎಂದು ಹೇಳಿದರು. ಇದರಿಂದ ಕೆರಳಿದ ರಾಯರ ಮಠದ ಭಕ್ತರು, ಶ್ರೀಗಳು ತೆರಳಿದ ನಂತರ, ಕೊಪ್ಪಳದ ರಾಯರ ಮಠ ಯಾರಿಗೂ ಸೇರಿದ್ದಲ್ಲ, ಐದು ದಶಕಗಳಿಂದ ಸ್ವತಂತ್ರವಾಗಿ ನಡೆದುಕೊಂಡು ಬಂದಿದೆ. ಕೊಪ್ಪಳದ ಜನರೇ ನಡೆಸಿಕೊಂಡು ಹೋಗುತ್ತಿದ್ದಾರೆ. ಮುಂದೆಯೂ ನಮಗೆ ಸಂಪೂರ್ಣ ಅಧಿಕಾರ ಕೊಡಬೇಕು. ಯಾರ ಹಸ್ತಕ್ಷೇಪ ಸರಿಯಲ್ಲ.