ಕೊಪ್ಪಳ ಗವಿಮಠದಲ್ಲಿ ಹಿಂದು, ಮುಸ್ಲಿಂ ಭೇದವಿಲ್ಲದೇ 2000ಕ್ಕೂ ಹೆಚ್ಚು ಮಕ್ಕಳಿಗೆ ಅಕ್ಷರಾಭ್ಯಾಸ

Published : May 23, 2025, 05:38 PM ISTUpdated : May 23, 2025, 06:16 PM IST

ಕೊಪ್ಪಳದ ಗವಿಸಿದ್ದೇಶ್ವರ ಮಠದಲ್ಲಿ 2000ಕ್ಕೂ ಹೆಚ್ಚು ಮಕ್ಕಳಿಗೆ ಅಕ್ಷರಾಭ್ಯಾಸ ಕಾರ್ಯಕ್ರಮ ನಡೆಯಿತು. ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಗಳು ಮಕ್ಕಳಿಗೆ ಮೊದಲ ಅಕ್ಷರ ಬರೆಸಿದರು. ಪೋಷಕರು ತಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಪ್ರಾರ್ಥಿಸಿದರು.

PREV
15

ಪ್ರತಿಯೊಬ್ಬ ಪೋಷಕರಿಗೂ ತಮ್ಮ ಮಕ್ಕಳಿಗೆ ತಾಯಿ ಸರಸ್ವತಿ ದೇವಿ ಕೃಪೆ ಸಿಗಬೇಕು, ವಿದ್ಯಾಭ್ಯಾಸದಲ್ಲಿ ಮಕ್ಕಳು ಸದಾ ಮುಂದೆ ಇರಬೇಕು ಎಂಬ ಮಹಾ ಆಸೆ ಇರತ್ತೆ, ಇದಕ್ಕಾಗಿ ಶೃಂಗೇರಿ ಶಾರಧಾಂಬೆಯ ಸನ್ನಿದಿಯಲ್ಲಿ ಅಕ್ಷರಾಭ್ಯಾಸ ಮಾಡಲಾಗತ್ಯೆ, ಆದ್ರೆ ಉತ್ತರ ಕರ್ನಾಟಕದ ಭಾಗದಲ್ಲಿನ ಸಾಮಾನ್ಯ ಜನರಿಗೆ ಅದು ಕಷ್ಟ ಸಾಧ್ಯ, ಅದಕ್ಕಾಗಿ ಶಿಕ್ಷಣಕ್ಕೆ ಹೆಸರಾದ ಕೊಪ್ಪಳದ ಗವಿಮಠದಲ್ಲೆ ಅಕ್ಷರಾಭ್ಯಾಸ ನಡೆಸಲಾಗಿದೆ.

25

ಮಠದ ಬಳಿ ಒಂದೆಡೆ ಮಕ್ಕಳನ್ನು ಕರೆದುಕೊಂಡು ಸಾಲಾಗಿ ನಿಂತಿರುವ ಪಾಲಕರು, ಇನ್ನೊಂದಡೆ ಚಿಣ್ಣರ ಕೈ ಹಿಡಿದು ಅಕ್ಷರಭ್ಯಾಸ ಮಾಡಿಸುತ್ತಿರುವ ಸ್ವಾಮೀಜಿಗಳು. ಸ್ವಾಮಿಜಿಯ ಕೈ ಹಿಡಿದು ಜೀವನದ ಮೊದಲ ಅಕ್ಷರ ಬರಿತಾ ಉಜ್ವಲ ಭವಿಷ್ಯಕ್ಕೆ ನಾಂದಿ ಹಾಡ್ತಿರೊ ಪುಠಾಣಿ ಮಕ್ಕಳು, ಇವೇಲ್ಲ ದೃಶ್ಯಗಳು ಕಂಡು ಬಂದಿದ್ದು ಕೊಪ್ಪಳದ ಗವಿಸಿದ್ದೇಶ್ವರ ಮಠದಲ್ಲಿ. ಇನ್ನೇನು ನಾಲ್ಕೈದು ದಿನ ಕಳೆದರೆ ಶೈಕ್ಷಣಿಕ ವರ್ಷ ಆರಂಭವಾಗಲಿದೆ. ಈ ಹಿನ್ನಲೆಯಲ್ಲಿ ಚಿಣ್ಣರು ಹೊಸದಾಗಿ ಶಾಲೆಗೆ ಹೋಗಲು ಪ್ರಾರಂಭ ಮಾಡುತ್ತಾರೆ. ಈ ವೇಳೆಯಲ್ಲಿ ಹೊಸದಾಗಿ ಶಾಲೆಗ ಹೋಗುವ ಮಕ್ಕಳಿಗೆ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಗಳು ಅಕ್ಷರಭ್ಯಾಸ ಮಾಡಿಸಿದರು.

35

ಕೊಪ್ಪಳ ಗವಿಸಿದ್ದೇಶ್ವರ ಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಗಳು ಮಕ್ಕಳ ಕೈ ಹಿಡಿದು ಓಂಕಾರ ಹಾಗೂ ಓಂ ಗವಿಸಿದ್ದೇಶ್ವರಾಯನಮಃ ಎಂದು ಬರೆಸುತ್ತ ಮೊದಲ ಅಕ್ಷರಭ್ಯಾಸ ಮಾಡಿಸಿದರು. ತಮ್ಮ ಮಕ್ಕಳೊಂದಿಗೆ ಆಗಮಿಸಿದ ಪೊಷಕರು ಶ್ರೀಗಳ ಹಸ್ತದಿಂದ ಅಕ್ಷರಾಭ್ಯಾಸ ಮಾಡಿಸಿ ಮಕ್ಕಳ ಭವಿಷ್ಯ ಉಜ್ವಲವಾಗಲಿ ಎಂದು ತಾಯಿ ಸರಸ್ವತಿಯಲ್ಲಿ ಪ್ರಾರ್ಥನೆ ಮಾಡಿದರು. ಬೆಳಿಗ್ಗೆಯಿಂದಲೇ ಪಾಲಕರು ತಮ್ಮ ಮಕ್ಕಳನ್ನು ಕರೆದುಕೊಂಡು ಮಠಕ್ಕೆ ಆಗಮಿಸುತ್ತಿದ್ದರು. ಸರತಿ ಸಾಲಿನಲ್ಲಿ ತಮ್ಮ ಪುಟ್ಟ ಪುಟ್ಟ ಕಂದಮ್ಮಗಳ ಜೊತೆಗೆ . ಸ್ಲೇಟು, ಬಳಪ ಹಿಡಿದುಕೊಂಡು ಮೊದಲ ಅಕ್ಷರಗಳನ್ನ ಶ್ರೀಗಳಿಂದ ಬರೆಸಲು ಉತ್ಸುಕರಾಗಿದ್ದರು.

45

ಕಳೆದ 8 ವರ್ಷಗಳಿಂದ ಗವಿಮಠದಲ್ಲಿ ಶ್ರೀಗಳು ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸುತ್ತಾ ಬಂದಿದ್ದಾರೆ. ಮಕ್ಕಳಿಗೆ ಅಕ್ಷರಾಭ್ಯಾಸ ಪದ್ಧತಿಯ ದೂರದ ಶೃಂಗೇರಿ, ಕೊಲ್ಲೂರಿನಲ್ಲಿ ನಡೆಯುತ್ತ ಬಂದಿವೆ. ಆದರೆ ಉತ್ತರ ಕರ್ನಾಟಕದಲ್ಲಿ ಮೊದಲ ಬಾರಿಗೆ 09 ವರ್ಷಗಳ ಹಿಂದೆ ಗವಿಮಠದಲ್ಲಿ ಅಭಿನವ ಶ್ರೀ ಗಳು ಅಕ್ಷರಾಭ್ಯಾಸ ಶುರು ಮಾಡಿದರು. ಈ ಹಿನ್ನೆಲೆ ಇಂದು ಮಠಕ್ಕೆ 2 ಸಾವಿರಕ್ಕೂ ಅಧಿಕ ಜನ ಪೋಷಕರು ತಮ್ಮ ಮಕ್ಕಳನ್ನ ಕರೆದುಕೊಂಡು ಬಂದು ಶ್ರೀಗಳಿಂದ ಅಕ್ಷರಾಬ್ಯಾಸ ಮಾಡಿಸಿದರು. ಗವಿಮಠದ ಶ್ರೀ ಗಳ ಆಶಿರ್ವಾದ ಪಡೆದರು. ಶ್ರೀ ಗಳಿಂದ ಅಕ್ಷರಾಭ್ಯಾಸ ಮಾಡೀಸಿದ್ದು ತುಂಬಾ ಖುಷಿ ಯಾಗಿದೆ ಎಂದು ಪೊಷಕರು ಖುಷಿ ಹಂಚಿಕೊಂಡಿದ್ದಾರೆ.

55

ಕೊಪ್ಪಳದ ಗವಿಮಠ ಶಿಕ್ಷಣಕ್ಕೆ ಹೆಸರುವಾಸಿಯಾದ ಮಠ, ಸಾವಿರಾರು ಮಕ್ಕಳು ಈ ಮಠದ ನೆರಳಲ್ಲಿ ವಿದ್ಯೆ ಕಲಿತಾರೆ. ಇಲ್ಲಿ ಸಾವಿರಾರು ಮಕ್ಕಳು ಉಜ್ವಲ ಭವಿಷ್ಯ ಕಟ್ಟಿಕೊಂಡಿದ್ದಾರೆ. ಇಂತಹ ಪವಿತ್ರ ಸ್ಥಳದಲ್ಲಿ ಪೂಜ್ಯ ಶ್ರೀಗಳ ಕೈಯಲ್ಲಿ ಮೊದಲ ಅಕ್ಷರ ಬರೆದ ಈ ಪುಠಾಣಿ ಮಕ್ಕಳು ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗ್ತಾರೆ ಸಮಾಜದ ಗಣ್ಯ ವ್ಯಕ್ತಿಗಳಾಗ್ತಾರೆ ಎನ್ನುವುದು ಈ ಪೊಷಕರ ನಂಬಿಕೆ ಯಾಗಿದೆ.

ವರದಿ - ದೊಡ್ಡೇಶ್ ಯಲಿಗಾರ್, ಏಷ್ಯಾನೆಟ್ ಸುವರ್ಣ ನ್ಯೂಸ್

Read more Photos on
click me!

Recommended Stories