ಕಳಸ-ಎನ್.ಆರ್.ಪುರ ತಾಲೂಕಿನದ್ದು ಒಂದು ಕಥೆಯಾದ್ರೆ ಮೂಡಿಗೆರೆ ತಾಲೂಕಿನದ್ದು ಮತ್ತೊಂದು ಕಥೆ. ಮೂಡಿಗೆರೆ ತಾಲೂಕಿನಲ್ಲಿ ಸುರಿದ ಭಾರೀ ಮಳೆಯಿಂದ ಮಟ..ಮಟ.. ಮಧ್ಯಾಹ್ನವೇ ವಾಹನಗಳ ಲೈಟ್ ಆನ್ ಮಾಡಿಕೊಂಡು ಓಡಾಡುವಂತಾಗಿತ್ತು. ಕೊಟ್ಟಿಗೆಹಾರ, ಬಣಕಲ್, ಬಾಳೂರು ಸುತ್ತಮುತ್ತ ಸುರಿದ ಭಾರೀ ಮಳೆಗೆ ಜನಜೀವನ ಕೂಡ ಸಂಪೂರ್ಣ ಅಸ್ತವ್ಯಸ್ತವಾಗಿತ್ತು.
ಭಾರೀ ಮಳೆಯಿಂದ ಚಾರ್ಮಾಡಿ ಘಾಟಿಯಲ್ಲಿ ವಾಹನಗಳು ಸಂಚಾರ ಮಾಡದಂತಾಗಿತ್ತು. ಹಾವು-ಬಳುಕಿನ ಮೈಕಟ್ಟಿನ ಚಾರ್ಮಾಡಿ ರಸ್ತೆಯಲ್ಲಿ ಭಾರೀ ಮಳೆಯಿಂದ ವಾಹನಗಳು ನಿಂತಲ್ಲೇ ನಿಂತಿದ್ದವು. ಚಾರ್ಮಾಡಿಯಲ್ಲಿ ಮಳೆ ಇಲ್ಲದಾಗಲೇ ಸಂಚಾರ ಕಷ್ಟ. ಇನ್ನು ಭಾರೀ ಮಳೆ ಮಧ್ಯೆ ಸಂಚಾರ ಮತ್ತಷ್ಟು ಕಷ್ಟ. ವಾಹನಗಳ ಹೆಡ್ ಲೈಟ್, ಫಾಗ್ ಲೈಟ್ ಹಾಕಿಕೊಂಡು ಹೋದರೂ ಸಂಚಾರ ಕಷ್ಟ. ಹಾಗಾಗಿ, ಭಾರೀ ಮಧ್ಯೆ ಚಾರ್ಮಾಡಿಯಲ್ಲಿ ಸಂಚಾರ ಅಸಾಧ್ಯ ಎಂದು ವಾಹನಗಳು ನಿಂತಲ್ಲೇ ನಿಲ್ಲುವಂತಹಾ ಸ್ಥಿತಿ ನಿರ್ಮಾಣವಾಗಿತ್ತು.