ತಹಸೀಲ್ದಾರ್ ಮನವೊಲಿಸಿದ್ರೂ ಅಭ್ಯರ್ಥಿಗಳು ಪರೀಕ್ಷೆ ಬರೆಯಲು ಹಿಂದೇಟು ಹಾಕಿದರು. ಅಲ್ಲದೆ ಪ್ರಶ್ನೆ ಪತ್ರಿಕೆ ಇಲ್ಲದೆ ಪರೀಕ್ಷೆ ಹೇಗೆ ಬರೆಯುವುದು ಎಂದು ಅಭ್ಯರ್ಥಿಗಳು ವಾಗ್ವಾದ ನಡೆಸಿದರು.
ಸಿಂಧನೂರು ಪದವಿ ಕಾಲೇಜಿನ ಕೇಂದ್ರದಲ್ಲಿ ವ್ಯವಸ್ಠೆ ಮಾಡಲಾಗಿತ್ತು. 34 ಕೊಠಡಿಯಲ್ಲಿ 840 ಅಭ್ಯರ್ಥಿಗಳ ಪರೀಕ್ಷೆಗೆ ಹಾಜರಾಗಿದ್ದರು. ಕೊಠಡಿಗಳ ಸಂಖ್ಯೆ ಕಡಿಮೆ, ಪ್ರಶ್ನೆ ಪತ್ರಿಕೆಯೂ ಕಡಿಮೆಯಾಗಿದ್ದರಿಂದ ಅಕ್ಕಪಕ್ಕದ ಅಭ್ಯರ್ಥಿಗಳಿಗೆ ಒಂದೇ ಸಿರೀಜ್ನ ಪ್ರಶ್ನೆ ಪತ್ರಿಕೆ ವಿತರಣೆ ಮಾಡಿದ್ದ ಸಿಬ್ಬಂದಿ. ಮತ್ತೊಂದು ಕಡೆ 24 ಅಭ್ಯರ್ಥಿಗಳ ಪೈಕಿ ಕೇವಲ 12 ಜನ ಅಭ್ಯರ್ಥಿಗಳಿಗೆ ಪ್ರಶ್ನೆ ಪತ್ರಿಕೆ ವಿತರಣೆ ಮಾಡಲಾಗಿದೆ ಎಂದು ಅಭ್ಯರ್ಥಿಗಳು ಆರೋಪಿಸಿದ್ದಾರೆ. ಹೀಗಾಗಿ ಕಡಿಮೆ ಪ್ರಶ್ನೆ ಪತ್ರಿಕೆ ಸರಬರಾಜು ಮಾಡಿದ ಕೆಪಿಎಸ್ಸಿ ವಿರುದ್ಡ ಅಭ್ಯರ್ಥಿಗಳು ಆಕ್ರೋಶಗೊಂಡರು. ಪರೀಕ್ಷೆ ಬರೆಯದೇ ಕುಷ್ಟಗಿ- ಸಿಂಧನೂರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.ಆದರೆ ಅಭ್ಯರ್ಥಿಗಳ ಆಕ್ರೋಶದ ನಡುವೆಯೂ ಆಡಳಿತ ಮಂಡಳಿ ಪರೀಕ್ಷೆ ನಡೆಸಿದ 34 ಕೊಠಡಿಗಳ ಪೈಕಿ 8 ಕೊಠಡಿಯಲ್ಲಿ ಅಭ್ಯರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ.