ಈ ಮೂಲಕ ಬೆಂಗಳೂರು ನಗರ ಜಿಲ್ಲೆಯಲ್ಲಿ ನಡೆದ ಈ ಕ್ರಮದಿಂದ ಸರ್ಕಾರದ ಬೊಕ್ಕಸಕ್ಕೆ ಸುಮಾರು ₹30 ಲಕ್ಷ ನಷ್ಟವಾಗುವದು ತಡೆಯಲ್ಪಟ್ಟಿದೆ. ಅಬಕಾರಿ ಇಲಾಖೆಯ ಬೆಂಗಳೂರು ಉತ್ತರ ವಿಭಾಗದ ಜಂಟಿ ಆಯುಕ್ತ ಫಿರೋಜ್ ಖಾನ್ ಖಿಲ್ಲೇದಾರ್, ನಗರ ಜಿಲ್ಲೆ-3ರ ಉಪ ಆಯುಕ್ತ ಡಾ. ಕೆ.ಎಸ್. ಮುರಳಿ, ಉಪವಿಭಾಗ 05ರ ಉಪ ಅಧೀಕ್ಷಕ ಸಿ. ಲಕ್ಷ್ಮೀಶ, ಕೆ.ಎಸ್.ಬಿ.ಸಿ.ಎಲ್, ಕಂದಾಯ ಹಾಗೂ ಇತರ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಯ ಸಮ್ಮುಖದಲ್ಲಿ ಜೂನ್ 12ರಂದು ಈ ಮದ್ಯವನ್ನು ನಾಶಪಡಿಸಲಾಯಿತು.