ಮತ್ತೊಂದೆಡೆ ಬರುವ ಜಲದ ನೀರು ಹೊರಗೆ ಹೋಗುವಂತೆ ಚರಂಡಿ ಮಾಡಲಾಗಿದೆ. ಆದರೆ ಇಲಿ, ಹೆಗ್ಗಣಗಳು ದೊಡ್ಡದೊಡ್ಡ ಬಿಲಗಳನ್ನು ಕೊರೆದು ನೀರೆಲ್ಲವೂ ಬಿಲದೊಳಗೆ ಹೋಗುತ್ತಿದೆ. ಇದು ಭೂಕುಸಿತದ ಆತಂಕವನ್ನು ಮತ್ತಷ್ಟು ಜಾಸ್ತಿ ಮಾಡಿದೆ. ನಾವು ಬೇರೆಡೆ ಎಲ್ಲಿಗೆ ಹೋಗಲು ಅವಕಾಶವೂ ಇಲ್ಲ. ಪಂಚಾಯಿತಿ ಅವರಿಗೆ ಹೇಳಿದರೆ ಇಲ್ಲಿ ತಡೆಗೋಡೆ ಮಾಡುವಷ್ಟು ದೊಡ್ಡ ಅನುದಾನವೂ ಇಲ್ಲ. ಮಳೆಗಾಲ ಮುಖಿಯಲಿ ನೋಡೋಣ ಎನ್ನುತ್ತಿದ್ದಾರೆ. ಆದರೆ ಅಷ್ಟರಲ್ಲಾಗಲೇ ಏನಾದರೂ ದುರಂತ ಸಂಭವಿಸಿದರೆ ಯಾರು ಹೊಣೆ ಎನ್ನುತ್ತಿದ್ದಾರೆ.