ಬೆಂಗ​ಳೂರು: KSRTC ಬಸ್ ನಿಲ್ದಾ​ಣ​​ವಾಯ್ತು ಕೊರೋನಾ ಸೆಂಟರ್‌..!

First Published Aug 6, 2020, 7:48 AM IST

ಬೆಂಗಳೂರು(ಆ.06): ಕೊರೋನಾ ರೋಗ ಲಕ್ಷಣ ಇಲ್ಲದ ಸೋಂಕಿತರಿಗೆ ಚಿಕಿತ್ಸೆ ನೀಡಲು ಕೆಎಸ್‌ಆರ್‌ಟಿಸಿಗೆ ಸೇರಿದ ಪೀಣ್ಯದಲ್ಲಿನ ಬಸವೇಶ್ವರ ಬಸ್‌ ನಿಲ್ದಾಣದಲ್ಲಿ ಕೊರೋನಾ ಆರೈಕೆ ಕೇಂದ್ರ ಆರಂಭಿಸಲಾಗಿದೆ. 

ನೂತನ ಕೊರೋನಾ ಆರೈಕೆ ಕೇಂದ್ರವನ್ನು ಉದ್ಘಾಟಿಸಿದ ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ
undefined
ರೋಟರಿ, ಅದ್ವಿಕಾ ಕೇರ್‌ ಫೌಂಡೇಶನ್‌ ಮತ್ತು ನಯೋನಿಕಾ ಐ ಟ್ರಸ್ಟ್‌ ಸಹಯೋಗದೊಂದಿಗೆ ಕೇಂದ್ರ ಪ್ರಾರಂಭಿಸಿದ್ದು, ಇಂದಿನಿಂದ(ಗುರುವಾರ) ಕಾರ್ಯ ನಿರ್ವಹಿಸಲಿದೆ.
undefined
ಬಸ್‌ ನಿಲ್ದಾಣದ ಕೆಳ ಮತ್ತು ಮೊದಲ ಮಹಡಿಯಲ್ಲಿ ಸೋಂಕಿತರ ಆರೈಕೆಗಾಗಿ 200 ಹಾಸಿಗೆಗಳನ್ನು ಸಿದ್ಧತೆ ಮಾಡಿಕೊಳ್ಳಲಾಗಿದೆ. ಅವುಗಳಲ್ಲಿ ಶೇ.50 ಹಾಸಿಗೆಗಳು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸಿಬ್ಬಂದಿ ಮತ್ತವರ ಕುಟುಂಬದವರಿಗೆ ಉಚಿತವಾಗಿ ಚಿಕಿತ್ಸೆ ನೀಡಲು ಮೀಸಲಿಡಲಾಗಿದೆ. ಉಳಿದ ಹಾಸಿಗೆಗಳ ಪೈಕಿ ಶೇ.10 ರೋಟರಿ ಮತ್ತು ಟೈಟಾನ್‌ ಸಂಸ್ಥೆಯಿಂದ ಶಿಫಾರಸು ಮಾಡಲ್ಪಟ್ಟ ರೋಗಿಗಳಿಗೆ ಕಾಯ್ದಿರಿಸಲಾಗಿದೆ.
undefined
ಕೇಂದ್ರ ತುರ್ತು ಚಿಕಿತ್ಸಾ ವಾರ್ಡ್‌ ಮತ್ತು 10 ಹಾಸಿಗೆಗಳ ಐಸಿಯು ಕೂಡ ಹೊಂದಿದೆ
undefined
click me!