ಫೋಟೋಸ್: ಕೊರೋನಾ ಯುದ್ಧಕ್ಕೆ ಚಪ್ಪಾಳೆ ತಟ್ಟಿ ಬೆಂಬಲಿಸಿದ ಶ್ರೀ ಸಾಮಾನ್ಯ
First Published Mar 22, 2020, 6:41 PM ISTವಿಶ್ವದೆಲ್ಲೆಡೆ ಕೋವಿಡ್ 19 ಎಂಬ ಎಂಬ ವೈರಸ್ ಸಾವಿರಾರು ಮಂದಿಯನ್ನು ಬಲಿ ತೆಗೆದುಕೊಳ್ಳುತ್ತಿದ್ದು, ಈ ಮಾಹಾಮಾರಿ ಭಾರತದಲ್ಲಿಯೂ ಪಸರಿಸುತ್ತಿದೆ. ಜನರ ಪ್ರಾಣ ಉಳಿಸಲು ವೈದ್ಯರು, ವೈದ್ಯಕೀಯ ಸಿಬ್ಬಂದಿ ಸೇರಿ ಹಲವರು ಹಗಲು-ರಾತ್ರಿ ಶ್ರಮಿಸುತ್ತಿದ್ದಾರೆ. ಈ ಹೋರಾಟದಲ್ಲಿ ಎಲ್ಲರೂ ಒಗ್ಗಟ್ಟಾಗಿರೋಣ ಎಂದು ಸಾರಲು 'ತಟ್ಟೋಣ ಬನ್ನಿ ಚಪ್ಪಾಳೆ...' ಎಂಬ ಅಭಿಯಾನ ನಡೆಯಿತು. ಪ್ರಧಾನಿ ಮೋದಿ ಕರೆ ನೀಡಿದ ಈ ಅಭಿಯಾನಕ್ಕೆ ದೇಶದೆಲ್ಲೆಡೆ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿದೆ. ಕರ್ನಾಟಕದಲ್ಲಿ ಚಪ್ಪಾಳೆ ಹೊಡೆದ ಕ್ಷಣಗಳ ಕೆಲವು ಪೋಟೋಗಳು...