ಮೊನ್ನೆ ರೈತ ಬಲಿ, ಇಂದು ಕಾಡಾನೆ ಸಾವು: ಕಾಡಾನೆಗಳ ದಾಳಿಯಿಂದ ಕಾಫಿನಾಡ ಮಲೆನಾಡು ಭಾಗದಲ್ಲೂ ಜನಸಾಮಾನ್ಯರು ಜೀವ ಕಳೆದುಕೊಳ್ಳುತ್ತಿದ್ದಾರೆ. ಮೊನ್ನೆ ಯುಗಾದಿ ಹಬ್ಬದಂದೇ ಮನೆ ಪಕ್ಕ ಹಸು ಕಟ್ಟುವಾಗ ಆನೆ ದಾಳಿಯಿಂದ ರೈತ ಸಾವನ್ನಪ್ಪಿದ್ದನು. ತೋಟದಲ್ಲೇ ನಿಂತಿದ್ದ ಆನೆ ರೈತ ಆನೆ ಉಸಿರಾಟದ ಶಬ್ಧ ಕೇಳಿ ಬ್ಯಾಟರಿ ಬಿಡುತ್ತಿದ್ದಂತೆ ಸೊಂಡಿಲಿನಿಂದ ಸುತ್ತಿ ಮರಕ್ಕೆ ಹೊಡೆದು ಸಾಯಿಸಿತ್ತು. ಇತ್ತೀಚೆಗೆ ಎನ್.ಆರ್.ಪುರ ತಾಲೂಕಿನಲ್ಲೂ ತಿಂಗಳಿಗೆ ಒಂದರಂತೆ ಎರಡು ತಿಂಗಳಲ್ಲಿ ಇಬ್ಬರು ಆನೆ ದಾಳಿಗೆ ಸಾವನ್ನಪ್ಪಿದ್ದರು. ಚಿಕ್ಕಮಗಳೂರು ತಾಲೂಕಿನ ಆಲ್ದೂರಿನಲ್ಲೂ ಇಬ್ಬರು ಸಾವನ್ನಪ್ಪಿದ್ದರು.
ವರದಿ : ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್