ಈ ಕುರಿತು ಮಾತನಾಡಿರುವ ವಿರಾಜಪೇಟೆ ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮಿ ಅವರು ಮನುಷ್ಯ ತಮ್ಮ ಅಂತರಂಗವನ್ನು ಸ್ವಚ್ಛಗೊಳಿಸಿಕೊಳ್ಳಬೇಕಾಗಿದೆ. ಇಡೀ ಪ್ರಕೃತಿಯಲ್ಲಿ ಯಾವ ಪಶು ಪಕ್ಷಿಯೂ ಪ್ರಕೃತಿಗೆ ಹಾನಿ ಮಾಡುತ್ತಿಲ್ಲ. ಆದರೆ ಮನುಷ್ಯ ತನ್ನ ಅತಿ ಆಸೆಗಳಿಂದಾಗಿ ಪ್ರಕೃತಿಯನ್ನು ನಾಶ ಮಾಡುತ್ತಿದ್ದಾನೆ. ಕಾವೇರಿ ನದಿ ಉಳಿದರೆ ಇಂದು ಇಡೀ ದಕ್ಷಿಣ ಭಾರತ ಉಳಿಯಲು ಸಾಧ್ಯ. ಆ ಕೆಲಸವನ್ನು ಅಖಿಲ ಭಾರತ ಸನ್ಯಾಸಿಗಳ ಸಂಘ ಮಾಡುತ್ತಿರುವುದು ಶ್ಲಾಘನೀಯ ಎಂದಿದ್ದಾರೆ. ಈ ಕುರಿತು ಮಾತನಾಡಿರುವ ಕಾವೇರಿ ನದಿ ಸ್ವಚ್ಛತಾ ಆಂದೋಲನದ ರಾಜ್ಯ ಸಂಚಾಲಕ ಎಂ. ಎನ್. ಚಂದ್ರಮೋಹನ್ ಕಾವೇರಿ ಕೊಡಗಿನಲ್ಲಿ ಕೇವಲ ಒಂದೆರಡು ಕಿಲೋ ಮೀಟರ್ ಅಷ್ಟೇ ಸ್ವಚ್ಛವಾಗಿದ್ದಾಳೆ. ಉಳಿದಂತೆ ತವರು ಜಿಲ್ಲೆ ಕೊಡಗಿನಿಂದ ಹಿಡಿದು ಸಮುದ್ರ ಸೇರುವ ತನಕ ನಿತ್ಯ ಮಲಿನವಾಗುತ್ತಿದ್ದಾಳೆ. ಇದರ ಸ್ವಚ್ಛತೆ ಕಾಪಾಡದಿದ್ದರೆ ಮುಂದೆ ದಕ್ಷಿಣ ಭಾರತಕ್ಕೆ ಕಂಟಕ ಎದುರಾಗಲಿದೆ ಎಂದು ಎಚ್ಚರಿಸಿದ್ದಾರೆ.
ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್