ಸಂಸದ ತೇಜಸ್ವಿ ಸೂರ್ಯ ಮಹತ್ತರ ಕಾರ್ಯ: ವಿದ್ಯಾರ್ಹತೆಗೆ ತಕ್ಕಂತೆ ಉದ್ಯೋಗ ಪಡೆಯಿರಿ

First Published Sep 12, 2020, 4:42 PM IST

ಬೆಂಗಳೂರು ದಕ್ಷಿಣ ಸಂಸದ ತೇಜಸ್ವೀ ಸೂರ್ಯ ನೇತೃತ್ವದಲ್ಲಿ, ಫಿಡಿಲಿಟಸ್ ಕಾರ್ಪ್ , ಶಿಲ್ಪಾ ಫೌಂಡೇಶನ್ ಮತ್ತು ಆಕ್ಟ್ ಫೌಂಡೇಶನ್ ಸಹಯೋಗದೊಂದಿಗೆ ಉದ್ಯೋಗಾಕಾಂಕ್ಷಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ 'ಸಂಸದ್ ಉದ್ಯೋಗ ಮಿತ್ರ' ಎನ್ನುವ ನೂತನ ವೇದಿಕೆ ಆರಂಭಿಸಿದ್ದು, ವಿದ್ಯಾರ್ಹತೆಗೆ ತಕ್ಕಂತೆ ಉದ್ಯೋಗ ಪಡೆಯಬಹುದು. 

ಬೆಂಗಳೂರು ದಕ್ಷಿಣ ಸಂಸದ ಕಚೇರಿ ನೇತೃತ್ವದಲ್ಲಿ, ಫಿಡಿಲಿಟಸ್ ಕಾರ್ಪ್ , ಶಿಲ್ಪಾ ಫೌಂಡೇಶನ್ ಮತ್ತು ಆಕ್ಟ್ ಫೌಂಡೇಶನ್ ಸಹಯೋಗದೊಂದಿಗೆ ಉದ್ಯೋಗಾಕಾಂಕ್ಷಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ 'ಸಂಸದ್ ಉದ್ಯೋಗ ಮಿತ್ರ' ಎನ್ನುವ ನೂತನ ವೇದಿಕೆ ಆರಂಭಿಸಿದರು.
undefined
ಪ್ರತಿಷ್ಠಿತ ಕಂಪನಿಗಳು, ಎನ್ ಜಿ ಓ ಗಳು, ಸರ್ಕಾರಿ (ಸ್ಕಿಲ್ ಇಂಡಿಯಾ) ಯೋಜನೆಗಳು ಮತ್ತು ಉದ್ಯೋಗಾಕಾಂಕ್ಷಿಗಳ ನಡುವೆ 'ಸಂಸದ್ ಉದ್ಯೋಗ ಮಿತ್ರ' ಸೇತುವೆಯಂತೆ ಕಾರ್ಯನಿರ್ವಹಿಸಲಿದ್ದು, ಉದ್ಯೋಗಾಕಾಂಕ್ಷಿಗಳು ಇದರ ಸದುಪಯೋಗ ಪಡೆದುಕೊಳ್ಳಲು ಸಂಸದ ತೇಜಸ್ವೀ ಸೂರ್ಯ ಕರೆ ನೀಡಿದ್ದಾರೆ.
undefined
6 ಸಾವಿರಕ್ಕೂ ಅಧಿಕ ಹುದ್ದೆಗಳಿಗೆ ಸಂದರ್ಶನ ನಡೆಯಲಿದ್ದು, ಉದ್ಯೋಗಾಕಾಂಕ್ಷಿಗಳು https:tejasvisurya.insansad_udyoga_mitra ನಲ್ಲಿ ತಮ್ಮ ಬಯೋಡೇಟಾ, ಶೈಕ್ಷಣಿಕ ವಿವರಗಳನ್ನು ಅಪ್ ಲೋಡ್ ಮಾಡಿದಲ್ಲಿ, ವಿದ್ಯಾರ್ಹತೆಗೆ ತಕ್ಕಂತೆ ಸೂಕ್ತ ಉದ್ಯೋಗ ಪಡೆಯಲು ಅನುಕೂಲ ಕಲ್ಪಿಸಲಾಗಿದೆ.
undefined
ನಾವು ಉದ್ಯೋಗ ಆಕಾಂಕ್ಷಿಗಳನ್ನು ವಿವಿಧ ಬಿಪಿಓಗಳು, ಎನ್‌ಜಿಒಗಳು ಮತ್ತು ಇತರ ಕಂಪನಿಗಳೊಂದಿಗೆ ಸಂಪರ್ಕಿಸುತ್ತೇವೆ ಮತ್ತು ಬೆಂಗಳೂರು ದಕ್ಷಿಣದಲ್ಲಿ ಪ್ರತಿ ತಿಂಗಳ ಕೊನೆಯ ಭಾನುವಾರದಂದು ಉದ್ಯೋಗ ಮೇಳಗಳನ್ನು ಆಯೋಜಿಸುತ್ತೇವೆ ಎಂದು ತೇಜಸ್ವಿ ಸೂರ್ಯ ಹೇಳಿದರು.
undefined
ಸಂಸದ್ ಉದ್ಯೋಗ ಮಿತ್ರ' ಕಾರ್ಯಯೋಜನೆಯು ಲಾಭವನ್ನು ಉದ್ಯೋಗಾಕಾಂಕ್ಷಿಗಳು ಪಡೆಯಬೇಕೆಂದು ಬೆಂಗಳೂರು ದಕ್ಷಿಣ ಸಂಸದರ ಕಚೇರಿ, ಫಿಡಿಲಿಟಸ್ ಕಾರ್ಪ್, ಶಿಲ್ಪಾ ಫೌಂಡೇಶನ್ ಮತ್ತು ಆಕ್ಟ್ ಫೌಂಡೇಶನ್ ಸಂಸ್ಥೆಯ ತಿಳಿಸಿದೆ.
undefined
click me!