ರಾಜ್ಯ ನಾಯಕರಿಗೆ ಗೊತ್ತಾಗದಂತೆ ಖರ್ಗೆ ಹೆಸ್ರು ಘೋಷಣೆ: ಹೈಕಮಾಂಡ್ ಲೆಕ್ಕಾಚಾರ ಹೀಗಿದೆ!

First Published Jun 7, 2020, 7:28 PM IST

ಕರ್ನಾಟಕ ರಾಜ್ಯಸಭಾ ಸ್ಥಾನಕ್ಕೆ ಕಾಂಗ್ರೆಸ್ ಹಿರಿಯ ನಾಯಕ, ಮುತ್ಸದಿ ಮಲ್ಲಿಕಾರ್ಜುನ ಖರ್ಗೆ ಅವರನ್ನು  ಹೈಕಮಾಂಡ್  ಘೋಷಿಸಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯರಿಗೆ ಶಾಕ್ ಆಗಿದೆ. ಖರ್ಗೆ ಹೆಸರು ಪ್ರಕಟ ಮಾಡುವಾಗ ಹೈಕಮಾಂಡ್, ರಾಜ್ಯ ನಾಯಕ ಸಲಹೆ ಕೇಳಿಲ್ಲ. ಹೀಗಾಗಿ ಇತ್ತೀಚಿನ ವರ್ಷಗಳಲ್ಲಿ ರಾಜ್ಯ ಕಾಂಗ್ರೆಸ್ ನಾಯಕರನ್ನು ಸಂಪರ್ಕಿಸದೆ ಹೈಕಮಾಂಡ್ ತೆಗೆದುಕೊಂಡಿರುವ ಏಕೈಕ ನಿರ್ಧಾರವಿದು. ಸೋನಿಯಾ ತೆಗೆದುಕೊಂಡ ನಿರ್ಧಾರದ ಈ ಹಿಂದಿನ ಲೆಕ್ಕಾಚಾರ ಹೀಗಿದೆ!

ಕೆಪಿಸಿಸಿ ಘಟಕದ ಶಿಫಾರಸಿಗೆ ಕಾಯದೇ, ಸೋನಿಯಾ ಗಾಂಧಿ ನೇರವಾಗಿ ಪಕ್ಷ ನಿಷ್ಠೆಗೆ ಹೆಸರಾಗಿರುವ ಮತ್ತು ಸೋನಿಯಾ ಗಾಂಧಿ ಆಪ್ತವಲಯದಲ್ಲಿ ಕಾಣಿಸಿಕೊಳ್ಳುವ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರನ್ನು ಘೋಷಿಸಿದ್ದಾರೆ.
undefined
ಹಿಂದಿ ಮತ್ತು ಉರ್ದುವಿನಲ್ಲಿ ಲೀಲಾಜಾಲವಾಗಿ ಮಾತನಾಡುವ ಮಲ್ಲಿಕಾರ್ಜುನ ಖರ್ಗೆ, ಹಲವು ಬಾರಿ ಸಂಸತ್ತಿನಲ್ಲಿ ಪ್ರಧಾನಿ ಮೋದಿಯನ್ನು ಮಾತಿನಲ್ಲಿ ಕಟ್ಟಿ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಈ ಬಾರಿ ಮತ್ತೆ ಘರ್ಷಿಸಲು ಲೋಕಸಭೆಯಲ್ಲಿ ಸೋತ ಖರ್ಗೆ ಅವರನ್ನ ಸೋನಿಯಾ ರಾಜ್ಯಸಭೆ ಮೂಲಕ ಕರೆಯಿಸಿಕೊಂಡಿದ್ದಾರೆ.
undefined
ರಾಜಕೀಯವಾಗಿ ಬಿಜೆಪಿ ಮತ್ತು ಅದರಲ್ಲೂ ಪ್ರಮುಖವಾಗಿ ಮೋದಿಯವರನ್ನು ಎದುರಿಸಲು ಖರ್ಗೆಯೇ ಸೂಕ್ತ ಆಯ್ಕೆಯೆಂದು ಯಾವುದೇ ತಡಮಾಡದೇ ಸೋನಿಯಾ ಗಾಂಧಿ, ಖರ್ಗೆಯ ಹೆಸರನ್ನು ಪ್ರಕಟಿಸಿದ್ದಾರೆ.
undefined
ಲೋಕಸಭೆಯಲ್ಲಿ ನೇರವಾಗಿ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ನೇರವಾಗಿ ಎದುರಿಸಲಾರದೆ, ಅವರನ್ನು ಸೋಲಿಸಲು ಬಿಜೆಪಿ ಹೈಕಮಾಂಡ್ ಕಳೆದ ಲೋಕಸಭಾ ಚುನಾವಣೆಗೂ ಮೊದಲೇ ತಂತ್ರ ಮಾಡಿತ್ತು. ಪ್ರಬಲ ನಾಯಕ ಲೋಕಸಭೆಯನ್ನು ಪ್ರವೇಶಿಸದಂತೆ ತಡೆಯುವಲ್ಲಿಯೂ ಸಫಲವಾಗಿತ್ತು.
undefined
ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಹಗುರವಾಗಿ ಪರಿಗಣಿಸುವುದು ಸಾಧ್ಯವಿಲ್ಲ. ಸಮುದಾಯದ ನಾಯಕ ಎನ್ನುವುದು ಒಂದು ಕಾರಣವಾದರೆ ಖರ್ಗೆ ಅವರಿಗೆ ಇರುವ ಅನುಭವ ಮತ್ತೊಂದು ಕಾರಣ. ವಿಧಾನಸಭೆ, ವಿಧಾನ ಪರಿಷತ್, ಲೋಕಸಭೆಗಳಲ್ಲಿ ಕೆಲಸ ಮಾಡಿದ ಅನುಭವ ಮಲ್ಲಿಕಾರ್ಜುನ್ ಖರ್ಗೆ ಅವರಿಗಿದೆ.
undefined
ಹೀಗಾಗಿಯೆ ಹಲವು ಲೆಕ್ಕಾಚಾರಗಳನ್ನು ಇಟ್ಟುಕೊಂಡು ರಾಜ್ಯ ನಾಯಕರಿಂದ ಸಲಹೆ ಪಡೆದುಕೊಳ್ಳದೇ ದಿಢೀರ್ ಆಗಿಖರ್ಗೆ ಅವರನ್ನು ರಾಜ್ಯಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದೆ.
undefined
click me!