ಕಮಲ್ ಹಾಸನ್ ರ ಚಿತ್ರವನ್ನ ಕರ್ನಾಟಕದಲ್ಲಿ ಬ್ಯಾನ್ ಮಾಡುವ ವಿಚಾರಕ್ಕೆ ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿದ ಸುಮಲತಾ ಅಂಬರೀಶ್, ಸಿನಿಮಾ ಒಬ್ಬರಿಂದ ಆಗಿದ್ದಲ್ಲ. ನೂರಾರು ಜನರು ಸೇರಿದರೇ ಸಿನಿಮಾ ಆಗೋದು. ಸಿನಿಮಾದಲ್ಲಿ ಒಬ್ಬರದ್ದೇ ಶ್ರಮ ಇರುವುದಿಲ್ಲ. ಸಿನಿಮಾದಲ್ಲಿ ತಮಿಳು, ಕನ್ನಡ, ತೆಲುಗು ಎಲ್ಲ ಭಾಷೆಯವರು ಇರುತ್ತಾರೆ. ಇದರಿಂದ ಸಿನಿಮಾಗೆ ಅನ್ಯಾಯ ಮಾಡಬೇಕಾ ಎಂದು ಚರ್ಚೆಯಾಗಬೇಕು. ನಾನು ಈ ಬಗ್ಗೆ ಹೆಚ್ಚು ಮಾತನಾಡಿ ಕಾಂಟ್ರವರ್ಸಿ ಮಾಡಲ್ಲ. ಕಮಲ್ ಹಾಸನ್ ಕ್ಷಮೆ ಕೇಳಿದ್ರೆ ಒಳ್ಳೆಯದು ಎಂದರು.