ಕೊರೋನಾ ರಣಕೇಕೆ: ಹಿರೇಬಾಗೇವಾಡಿ ಜನರಲ್ಲಿ ಆಶಾಕಿರಣ ಮೂಡಿಸಿದ ಲಕ್ಷ್ಮೀ ಹೆಬ್ಬಾಳ್ಕರ್

First Published May 1, 2020, 4:57 PM IST

ಬೆಳಗಾವಿಯ ಹಿರೇಬಾಗೇವಾಡಿಯಲ್ಲಿ ದಿನೇ ದಿನೇ ಊಹಿಸಲಾಗದಷ್ಟು ಕೊರೋನಾ ಸೋಂಕು ಉಲ್ಬಣಿಸುತ್ತಿದೆ. ಇದರಿಂದ ಸ್ಥಳೀಯ  ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.  ಇಂತಹ ಸಂದಿಗ್ಧ ಸಂದರ್ಭದಲ್ಲಿ ಗ್ರಾಮೀಣ  ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ ಅಲ್ಲಿನ ಜನತೆಗೆ  ದಿನದ 24 ಗಂಟೆಯೂ ನಿಮ್ಮ ಸೇವೆಗೆ ಇದ್ದೇನೆ ಎನ್ನುವ ಮೂಲಕ  ಆ ಭಾಗದ ಜನತೆಯ ಮನದಲ್ಲಿ ಹೊಸ ಆಶಾಕಿರಣ ಮೂಡಿಸಿದ್ದಾರೆ.

ದೇಶದಲ್ಲಿ ಕೊರೋನಾ ವೈರಸ್ ಮಹಾಮಾರಿ ಅಬ್ಬರ ಕಡಿಮೆಯಾಗುತ್ತಿಲ್ಲ. ಬೆಳಗಾವಿ ಜಿಲ್ಲೆಯ ಹಿರೇಬಾಗೇವಾಡಿ ಗ್ರಾಮವೊಂದು ಮಹಾಮಾರಿಗೆ ತೀವ್ರವಾಗಿ ತತ್ತರಿಸಿದೆ.
undefined
ಕೊರೋನಾದಿಂದ ತತ್ತರಿಸುವ ಹಿರೇಬಾಗೇವಾಡಿ ಜನರಿಗೆ ಲಕ್ಷ್ಮೀ ಹೆಬ್ಬಾಳ್ಕರ್‌ ಹೊಸ ಆಶಾಕಿರಣ ಮೂಡಿಸಿದ್ದಾರೆ.
undefined
ಕೊರೋನಾ ಹಾಟ್‌ಸ್ಪಾಟ್ ಹಿರೇಬಾಗೇವಾಡಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ಡಿಸಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಭೇಟಿ ನೀಡಿದರು.
undefined
ಸರ್ಕಾರ ಹಾಗೂ ಜಿಲ್ಲಾಡಳಿತ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳತಿಲ್ಲ ಎನ್ನುವ ಹಲವಾರು ಗೊಂದಲಗಳಿಂದ ಭಯಭೀತರಾಗಿದ್ದ ಗ್ರಾಮದ ಜನರಿಗೆ ಧೈರ್ಯ ತುಂಬಿದರು
undefined
ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರ ಸಭೆ
undefined
ಅಗತ್ಯವಸ್ತುಗಳ ಪೂರೈಕೆಗೆ ಕ್ರಮ ಕೈಗೊಳ್ಳೋದಾಗಿ ಡಿಸಿಡಾ.ಎಸ್.ಬಿ.ಬೊಮ್ಮನಹಳ್ಳಿ ಭರವಸೆ
undefined
ಜಾನುವಾರುಗಳಿಗೆ ಮೇವು ಪೂರೈಕೆಗೂ ಕ್ರಮ ಕೈಗೊಳ್ಳೋದಾಗಿ ಭರವಸೆ
undefined
ಲಕ್ಷ್ಮೀ ಹೆಬ್ಬಾಕರ್ ಸಹ ಗ್ರಾಮಕ್ಕೆ ಬೇಕಾದಂತ ಮುಂಜಾಗ್ರತೆಯ ಕ್ರಮಗಳು ಹಾಗೂ ಚಿಕಿತ್ಸೆಗೆ ಬೇಕಾದ ಎಲ್ಲ ತರಹದ ವ್ಯವಸ್ಥೆಗಳನ್ನು ಮಾಡಿಕೊಡುವುದಾಗಿ ಧೈರ್ಯವನ್ನು ತುಂಬಿದರು,
undefined
ಹಿರೇಬಾಗೇವಾಡಿ ಗ್ರಾಮವೊಂದರಲ್ಲೇ 36 ಕೊರೋನಾ ಪ್ರಕರಣ ಪತ್ತೆಯಾಗಿದ್ದು, ಬೆಳಗಾವಿ ಜಿಲ್ಲೆಯಲ್ಲಿ 72 ಕೇಸ್ ಗಳಿವೆ
undefined
click me!