ಮಧ್ಯಪ್ರದೇಶ, ಕಮಲ್ ನಾಥ್ ಸರ್ಕಾರ ಉಳಿಸಲು ಮುಂದಾದ ಈ 13ರ ಪೋರ ಯಾರು?
First Published Mar 18, 2020, 3:22 PM ISTಮಧ್ಯಪ್ರದೇಶ ಸರ್ಕಾರ ಉರುಳುವ ಪರಿಸ್ಥಿತಿಯಲ್ಲಿದೆ. ಕಾಂಗ್ರೆಸ್ ನ ಬಹುತೇಕ ಎಲ್ಲಾ ನಾಯಕರು ಸರ್ಕಾರ ಉಳಿಸುವ ಪ್ರಯತ್ನದಲ್ಲಿದ್ದಾರೆ. ಹೀಗಿರುವಾಗ 13 ವರ್ಷದ ಬಾಲಕನೊಬ್ಬ ಕಮಲ್ ನಾಥ್ ಸರ್ಕಾರ ಉಳಿಸಲು ಸಿಎಂ ನಿವಾಸದೆದುರು ಧರಣಿ ಹೂಡಿದ್ದಾನೆ. ಹೌದು ಈತನ ಹೆಸರು ಲಕ್ಷ್ಯ್ ಗುಪ್ತಾ, ಈತ ಇತ್ತೀಚೆಗಷ್ಟೇ 8 ನೇ ತರಗತಿ ಪರೀಕ್ಷೆ ಬರೆದಿದ್ದಾನೆ. ಈ ಬಾಲಕ ಕಮಲ್ ನಾಥ್ ರವರ ಬಹುದೊಡ್ಡ ಅಭಿಮಾನಿ. ಅವರನ್ನು ತನ್ನ ರಾಜಕೀಯ ಗುರು ಹಾಗೂ ತಾನವರ ಶಿಷ್ಯ ಎಂದೇ ಪರಿಚಯಿಸಿಕೊಂಡಿದ್ದಾರೆ. ತಾನು ಮುಖ್ಯಮಂತ್ರಿಗಾಗಿ ಏನು ಬೇಕಾದರೂ ಮಾಡಲು ಸಿದ್ಧ ಎಂದಿದ್ದಾರೆ.