ಶಿವಮೊಗ್ಗ: ಕಿಲಾಡಿ ಲೇಡಿ ಸುಚಿತ್ರಾ ಹಾಗೂ ಜ್ಯೋತಿಷಿ ಕಮಲಾಕರ್ ಭಟ್ ಗ್ಯಾಂಗ್ ಸೇರಿ ಅಮಾಯಕ ವಸಂತ ನಾಯ್ಕ ಅವರನ್ನು ಹ*ತ್ಯೆ ಮಾಡಿರುವ ವಿಚಾರ ಇಡೀ ರಾಜ್ಯವೇ ಬೆಚ್ಚಿಬೀಳುವಂತೆ ಮಾಡಿದೆ. ಇದರ ನಡುವೆ ಈ ಸುಚಿತ್ರಾ ನವರಂಗಿ ಆಟದ ಮತ್ತೊಂದು ವಿಚಾರ ಬಯಲಾಗಿದೆ.
ಅನೈತಿಕ ಸಂಬಂಧ ಮತ್ತು ಕೊ*ಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಖ್ಯಾತ ಜ್ಯೋತಿಷಿ ಕಮಲಾಕರ ಭಟ್ ಹಾಗೂ ಸುಚಿತ್ರಾ ಕುರಿತಾದ ಇಂಟ್ರೆಸ್ಟಿಂಗ್ ವಿಚಾರಗಳು ದಿನದಿಂದ ದಿನಕ್ಕೆ ಬೆಳಕಿಗೆ ಬರುತ್ತಿವೆ. ಕೊ*ಲೆ ಆರೋಪಿ ಸುಚಿತ್ರಾ ನವರಂಗಿ ಆಟ ಕಥೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ.
26
ಮೂರು ವರ್ಷಗಳ ಹಿಂದೆ ಜಮೀನ್ದಾರರೊಬ್ಬರ ಜತೆ ಲವ್ವಿಡವ್ವಿ
ಈ ಕಿಲಾಡಿ ಆಂಟಿ ಸುಚಿತ್ರಾ, ಜ್ಯೋತಿಷಿ ಕಮಲಾಕರ ಭಟ್ ಜತೆ ಸಂಪರ್ಕಕ್ಕೆ ಬರುವ ಮುನ್ನ ಗುಲ್ಬರ್ಗದ ಜಮೀನ್ದಾರರೊಬ್ಬರ ಜತೆ ಮೂರು ವರ್ಷದಿಂದ ಲವ್ ರಿಲೇಷನ್ಶಿಪ್ನಲ್ಲಿದ್ದಳು ಎನ್ನುವ ವಿಚಾರ ಇದೀಗ ಬಯಲಾಗಿದೆ.
36
ಖಾಸಗಿ ಕ್ಷಣದ ಫೋಟೋಗಳು ಲಭ್ಯ
ಈ ಸುಚಿತ್ರಾ, ಗುಲ್ಬರ್ಗ ಜಮೀನ್ದಾರ ಶ*ಣ*ಬ*ಪ್ಪ ನೀಡಿದ್ದ ಹಣದಿಂದ ಅಪ್ಪು ಮೆಲೋಡೀಸ್ ಗುಲ್ಬರ್ಗ ಎನ್ನುವ ಹೆಸರಿನ ಆರ್ಕೆಸ್ಟ್ರಾ ನಡೆಸುತ್ತಿದ್ದಳು. ಇದೀಗ ಆತನೊಂದಿಗಿರುವ ಕೆಲವು ಖಾಸಗಿ ಕ್ಷಣದ ಫೋಟೋಗಳು ಏಷ್ಯಾನೆಟ್ ಸುವರ್ಣ ನ್ಯೂಸ್ಗೆ ಲಭ್ಯವಾಗಿವೆ.
ಗಂಡನನ್ನು ತೊರೆದು ಸುಚಿತ್ರಾ ಗುಲ್ಬರ್ಗಕ್ಕೆ ತೆರಳಿ ಶ*ಣ*ಬ*ಪ್ಪ ಜತೆ ಸುತ್ತಾಡುತ್ತಿದ್ದಳಂತೆ. ಇದಷ್ಟೇ ಅಲ್ಲದೇ ಗಂಡನಿಲ್ಲದ ಸಮಯದಲ್ಲಿ ಆತನನ್ನು ಮನೆಗೂ ಕರೆಸಿಕೊಳ್ಳುತ್ತಿದ್ದಳಂತೆ. ಇನ್ನು ಶರಣಬಸಪ್ಪ ನೀಡಿದ ಹಣವನ್ನು ಸಿದ್ದಾಪುರದಲ್ಲಿ ಈ ಸುಚಿತ್ರಾ ಬಡ್ಡಿಗೆ ಹಣ ನೀಡುತ್ತಿದ್ದಳು ಎನ್ನುವ ವಿಚಾರ ಬಯಲಾಗಿದೆ.
56
ಜಮೀನ್ದಾರನಿಗೆ ಕೈಕೊಟ್ಟ ಸುಚಿತ್ರಾ!
ಇನ್ನು ಈ ಸುಚಿತ್ರಾ, ಗುಲ್ಬರ್ಗದ ಜಮೀನ್ದಾರ ಶ*ಣ*ಬ*ಪ್ಪ ಜತೆ ಸಂಪರ್ಕದಲ್ಲಿರುವ ವಿಚಾರ ಜ್ಯೋತಿಷಿ ಕಮಲಾಕರ ಭಟ್ಗೆ ತಿಳಿಯುತ್ತಿದ್ದಂತೆಯೇ ಇಬ್ಬರ ನಡುವೆ ಮನಸ್ತಾಪ ಉಂಟಾಗಿತ್ತಂತೆ. ಇದಾದ ಬಳಿಕ ಶ*ಣ*ಬ*ಪ್ಪನಿಗೆ ಕೈಕೊಟ್ಟು ಕಮಲಾಕರ ಭಟ್ ಜತೆ ಈ ಸುಚಿತ್ರಾ ಲವ್ವಿಡವ್ವಿ ಮುಂದುವರೆಸಿದ್ದರು.
66
ಸಚಿತ್ರಾಳ ಹಣದಾಸೆಗೆ ಸಾಕಷ್ಟು ಗಿಫ್ಟ್ ಕೊಟ್ಟಿದ್ದ ಕಮಲಾಕರ ಭಟ್
ಈ ಸುಚಿತ್ರಾ ಶ*ಣ*ಬ*ಪ್ಪ ಸೇರಿದಂತೆ ಹಲವರ ಜತೆ ಸಂಪರ್ಕವಿಟ್ಟುಕೊಂಡಿದ್ದಳು ಎನ್ನಲಾಗುತ್ತಿದೆ. ಇನ್ನು ಸುಚಿತ್ರಾ ಹಣದ ದಾಹಕ್ಕೆ ಕಮಲಾಕರ ಭಟ್ ಕಾರು, ಬೈಕ್ಗಳನ್ನು ಉಡುಗೊರೆಯಾಗಿ ನೀಡಿದ್ದ. ಪತ್ನಿಯ ಈ ಲವ್ ರಿಲೇಷನ್ಶಿಪ್ನಿಂದ ಬೇಸತ್ತ ಪತಿ ಮಹೇಶ್ ನಾಯ್ಕ, ಕಳೆದ ಆರು ತಿಂಗಳಿನಿಂದ ಸುಚಿತ್ರಾಳಿಂದ ದೂರವಿದ್ದರು.