Nidagundi tragedy: ವಿಜಯಪುರದಲ್ಲಿ ಬೆಚ್ಚಿಬೀಳಿಸುವ ದುರಂತ; ಮನೆಯ ಛಾವಣಿ ಕುಸಿದು ಮಹಿಳೆ ಜೀವಂತ ಸಮಾಧಿ!

Published : May 21, 2026, 11:53 AM IST

ವಿಜಯಪುರ ಜಿಲ್ಲೆಯ ನಿಡಗುಂದಿ ಪಟ್ಟಣದಲ್ಲಿ ಮನಕಲುಕುವ ಘಟನೆ ನಡೆದಿದೆ. ಹಳೆಯ ಮಣ್ಣಿನ ಮನೆಯ ಮೇಲ್ಚಾವಣಿ ಕುಸಿದು 55 ವರ್ಷದ ಮಹಿಳೆ ಜೀವಂತ ಸಮಾಧಿಯಾಗಿದ್ದಾರೆ. 

PREV
16
ವಿಜಯಪುರದಲ್ಲಿ ಘೋರ ದುರಂತ!

ಪಟ್ಟಣದ ಗೌರೀಶ್ವರ ದೇವಸ್ಥಾನ ಸಮೀಪ ಈ ದುರ್ಘಟನೆ ನಸುಕಿನ ಜಾವ ಸಂಭವಿಸಿದೆ. ಮೃತರನ್ನು ಮಹಾದೇವಿ ವಾರದ ಎಂದು ಗುರುತಿಸಲಾಗಿದೆ. ಮೊನ್ನೆ ಸುರಿದ ಭಾರೀ ಮಳೆಯಿಂದ ಹಳೆಯ ಮನೆ ಸಂಪೂರ್ಣ ನೆನೆದು ದುರ್ಬಲಗೊಂಡಿತ್ತು ಎನ್ನಲಾಗಿದೆ. 

26
ಮನೆಯ ಛಾವಣಿ ಕುಸಿದು ಮಹಿಳೆ ಜೀವಂತ ಸಮಾಧಿ!

ರಾತ್ರಿ ಮನೆಯಲ್ಲಿ ಮಲಗಿದ್ದ ಮಹಾದೇವಿ ಅವರಿಗೆ ಅಪಾಯ ಕಾದಿದೆ ಎನ್ನುವುದೇ ಗೊತ್ತಿರಲಿಲ್ಲ. ಆದರೆ ನಸುಕಿನ ಜಾವ ಏಕಾಏಕಿ ಮನೆಯ ಮೇಲ್ಚಾವಣಿ ಭಾರೀ ಸದ್ದಿನೊಂದಿಗೆ ಕುಸಿದಿದೆ. ಕ್ಷಣಾರ್ಧದಲ್ಲೇ ಮಹಾದೇವಿ ಅವಶೇಷಗಳಡಿ ಸಿಲುಕಿ ಜೀವಂತ ಸಮಾಧಿಯಾಗಿದ್ದಾರೆ.

36
ಮಣ್ಣಿನ ರಾಶಿ ಹೊದ್ದು ಮಲಗಿದ ಪತ್ನಿ ಕಂಡು ಪತಿ ಶಾಕ್

ಇನ್ನೊಂದೆಡೆ ಮನೆಯ ಹೊರಭಾಗದಲ್ಲಿ ಮಲಗಿದ್ದ ಪತಿ ಶಿವಾನಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಒಳಗಿನಿಂದ ಕೇಳಿಬಂದ ಭೀಕರ ಸದ್ದಿಗೆ ಓಡಿಬಂದಾಗ ಮನೆ ಮಣ್ಣಿನ ರಾಶಿಯಾಗಿದ್ದ ದೃಶ್ಯ ಕಂಡು ಪತಿ ಆಘಾತಕ್ಕೊಳಗಾಗಿದ್ದಾರೆ..

46
ಇನ್ನು ಅದೆಷ್ಟು ಮನೆಗಳು ಸಾವಿಗೆ ಕಾದಿವೆಯೋ!

ಇನ್ನೂ ರಾಜ್ಯದಲ್ಲಿ ಅದೆಷ್ಟೋ ಕುಟುಂಬಗಳು ಮೊದಲ ತಲೆಮಾರಿನ ಮಣ್ಣಿನ ಮಾಳಿಗೆಯ ಮನೆಗಳಲ್ಲಿ ಜೀವ ಭಯದ ನಡುವೆ ಬದುಕುತ್ತಿವೆ. ಮಳೆ ಬಂದರೆ ಗೋಡೆ ಕುಸಿಯುವ ಭೀತಿ, ಗಾಳಿ ಬೀಸಿದರೆ ಮೇಲ್ಚಾವಣಿ ಹಾರಿ ಹೋಗುವ ಆತಂಕ.

56
ಕುಸಿದ ಛಾವಣಿ

ಸರ್ಕಾರ ಇಂತಹ ಬಡ ಕುಟುಂಬಗಳನ್ನು ಗುರುತಿಸಿ ವಸತಿ ಯೋಜನೆಯಡಿ ಸುರಕ್ಷಿತ ಮನೆಗಳನ್ನು ನಿರ್ಮಿಸಿಕೊಟ್ಟಿದ್ದರೆ, ಮಹಾದೇವಿಯಂತಹ ಅಮಾಯಕ ಜೀವಗಳನ್ನು ಉಳಿಸಬಹುದಿರಲಿಲ್ಲವೇ?

66
ಸ್ಥಳಕ್ಕೆ ಪೊಲೀಸರು ಭೇಟಿ, ಸ್ಥಳ ಪರಿಶೀಲನೆ

ಸದ್ಯಘಟನಾ ಸ್ಥಳಕ್ಕೆ ನಿಡಗುಂದಿ ಪೊಲೀಸ್ ಠಾಣೆ ಪೊಲೀಸರು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಹಾದೇವಿ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ

Read more Photos on
click me!

Recommended Stories