ಕಮಲಾಕರ್ ಗುರೂಜಿ ಅನೈತಿಕ ಸಂಬಂಧದ ಕುರುಹು, ಇಬ್ಬರ ಸಂಬಂಧಕ್ಕೆ ಸ್ಫೋಟಕ ತಿರುವು ಸಿಕ್ಕಿದ್ದು ಇಲ್ಲೇ!

Published : Feb 05, 2026, 03:20 PM IST

ಶಿವಮೊಗ್ಗದ ಜ್ಯೋತಿಷಿ ಕಮಲಾಕರ್ ಭಟ್ ಮತ್ತು ಸುಚಿತ್ರಾ ನಡುವಿನ ಅನೈತಿಕ ಸಂಬಂಧದ ಕುರಿತು ಮಗಳು ಸುಮಶ್ರೀ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ. ಈ ಸಂಬಂಧದ ಹಿನ್ನೆಲೆಯಲ್ಲಿ, ಸುಚಿತ್ರಾ ತನ್ನ ಪತಿ ಮತ್ತು ಕುಟುಂಬದ ಮೇಲೆ ದಾಳಿ ನಡೆಸಿ, ದೊಡ್ಡಪ್ಪನನ್ನು ಕೊಲೆ ಮಾಡಿಸಿದ್ದಾರೆ.

PREV
17
ಪಂಪ ನಗರ ಮನೆಯಲ್ಲಿ ಅನೈತಿಕ ಸಂಬಂಧದ ಕುರುಹು

ಶಿವಮೊಗ್ಗದಲ್ಲಿ ನಡೆದ ಜ್ಯೋತಿಷಿ ಕಮಲಾಕರ್ ಭಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಹೊಸ ಹೊಸ ಸ್ಫೋಟಕ ಮಾಹಿತಿಗಳು ಹೊರಬರುತ್ತಿವೆ. ಶಿವಮೊಗ್ಗದ ಪಂಪ ನಗರದಲ್ಲಿ ಜ್ಯೋತಿಷಿ ಕಮಲಾಕರ್ ಭಟ್ ಹಾಗೂ ಸುಚಿತ್ರಾ ನಡುವೆ ಕಳೆದ 9 ತಿಂಗಳಿಂದ ಅಕ್ರಮ ಸಂಬಂಧ ಇತ್ತು ಎಂಬುದಕ್ಕೆ ಸಂಬಂಧಿಸಿದ ಗಂಭೀರ ಆರೋಪಗಳನ್ನು, ಚಾಕು ಇರಿತ ಪ್ರಕರಣದಲ್ಲಿ ಹಲ್ಲೆಗೊಳಗಾದ ಮಹೇಶ್ ಅವರ ಪುತ್ರಿ ಸುಮಶ್ರೀ ಬಹಿರಂಗಪಡಿಸಿದ್ದಾರೆ.

27
ಅನೈತಿಕ ಸಂಸಾರಕ್ಕೆ ಸಾಕ್ಷಿಯಾಗಿತ್ತು ಪಂಪ ನಗರದ ಮನೆ

ಶಿವಮೊಗ್ಗದ ಪಂಪ ನಗರದಲ್ಲಿ ಸುಚಿತ್ರಾ ಜೊತೆ ಜ್ಯೋತಿಷಿ ಕಮಲಾಕರ್ ಭಟ್ ವಾಸವಾಗಿದ್ದ. ಪಂಪ ನಗರದಲ್ಲಿ ಬಾಡಿಗೆ ಮನೆ ಮಾಡಿ ಸುಚಿತ್ರಾ ಹಾಗೂ ಅವರ ಇಬ್ಬರು ಹೆಣ್ಣು ಮಕ್ಕಳನ್ನು ಇರಿಸಿದ್ದ. ಅಲ್ಲಿಯ ಪಕ್ಕದಲ್ಲಿ ಕನಸು ಎಂಟರ್ಪ್ರೈಸಸ್ ಹೆಸರಿನ ಜ್ಯೋತಿಷಿ ಕೇಂದ್ರದ ಬಿಪಿಓ ನಡೆಸುತ್ತಿದ್ದ. ಕಳೆದ 9 ತಿಂಗಳಿಂದ ಸುಚಿತ್ರ ಮತ್ತು ಆಕೆಯ ಮಕ್ಕಳು ಪಂಪ ನಗರದ ಇದೇ ಮನೆಯಲ್ಲಿ ವಾಸವಾಗಿದ್ದರು. ಪಂಪ ನಗರದ ಈ ಮನೆಯಲ್ಲಿ ಸುಚಿತ್ರ ಮತ್ತು ಕಮಲಾಕರ ಭಟ್ ಒಂದು ಕೋಣೆಯಲ್ಲಿ ವಾಸವಾಗಿದ್ದರೆ ಆಕೆಯ ಮಕ್ಕಳು ಮತ್ತೊಂದು ಕೋಣೆಯಲ್ಲಿ ವಾಸವಾಗಿದ್ದರು . ಅವರಿಬ್ಬರ ಅನೈತಿಕ ಸಂಸಾರಕ್ಕೆ ಈ ಮನೆ ಸಾಕ್ಷಿಯಾಗಿತ್ತು.

37
ಮಗಳ ಎಕ್ಸ್‌ಕ್ಲೂಸಿವ್ ಮಾತು

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುವರ್ಣ ನ್ಯೂಸ್ ಜೊತೆಗೆ ಮಾತನಾಡಿದ ಎಕ್ಸ್‌ಕ್ಲೂಸಿವ್ ಚಿಟ್ ಚಾಟ್‌ನಲ್ಲಿ, ಸುಮಶ್ರೀ ತಮ್ಮ ತಾಯಿ ಸುಚಿತ್ರಾ ಮತ್ತು ಜ್ಯೋತಿಷಿ ಕಮಲಾಕರ್ ಭಟ್ ನಡುವೆ ಇದ್ದ ಅಕ್ರಮ ಸಂಬಂಧದ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾಳೆ. “ಕಳೆದ 9 ತಿಂಗಳಿಂದ ನನ್ನ ತಾಯಿ ಮತ್ತು ಕಮಲಾಕರ್ ಭಟ್ ನಡುವೆ ಅಕ್ರಮ ಸಂಬಂಧ ಇತ್ತು. ಅದರಿಂದ ಬೇಸತ್ತು ನಾನು ತಂದೆಯೊಂದಿಗೆ ಇರಬೇಕು ಎಂದು ನಿರ್ಧರಿಸಿದ್ದೆ. ನಾನು ನನ್ನ ತಂದೆ ಮಹೇಶ್ ಅವರಿಗೆ ಕರೆ ಮಾಡಿ, ‘ನನ್ನನ್ನು ಇಲ್ಲಿಂದ ಕರೆದುಕೊಂಡು ಹೋಗದಿದ್ದರೆ ನಾನು ಆತ್ಮ*ಹತ್ಯೆ ಮಾಡಿಕೊಳ್ಳುತ್ತೇನೆ’ ಎಂದು ಹೇಳಿದ್ದೆ” ಎಂದು ಸುಮಶ್ರೀ ತಿಳಿಸಿದ್ದಾರೆ.

47
ಮನೆಯಿಂದ ಹೊರ ಹೋದ ಮಗಳು

ಅದರಂತೆ ಫೆಬ್ರವರಿ 1ರಂದು ಶಿವಮೊಗ್ಗದಿಂದ ಸಿದ್ದಾಪುರ ಪೊಲೀಸ್ ಠಾಣೆಗೆ ತೆರಳಿ, ಅಲ್ಲಿಂದ ಸಂಜೆ 7.30ರ ನಂತರ ತಂದೆಯ ಮನೆಗೆ ಹೋಗಿದ್ದೆ ಎಂದು ಅವರು ಹೇಳಿದ್ದಾರೆ. “ದೊಡ್ಡಪ್ಪ, ದೊಡ್ಡಮ್ಮ ಸೇರಿದಂತೆ ಮನೆಯವರು ಎಲ್ಲರೂ ಪ್ರೀತಿಯಿಂದ ನನ್ನನ್ನು ಬರಮಾಡಿಕೊಂಡರು” ಎಂದು ಸುಮಶ್ರೀ ಹೇಳಿದ್ದಾರೆ.

57
ರಾತ್ರಿ ನಡೆದ ಭೀಕರ ದಾಳಿ

ಆದರೆ ಅದೇ ದಿನ ರಾತ್ರಿ ಸುಮಾರು 10.30ರ ವೇಳೆಗೆ, ಸುಚಿತ್ರಾ ಕಾರಿನಲ್ಲಿ ಐದಾರು ಜನರೊಂದಿಗೆ ಬಂದು ಮನೆಗೆ ದಾಳಿ ನಡೆಸಿದರು“ಅವರು ಏಕಾಏಕಿ ಮನೆಗೆ ನುಗ್ಗಿ ನನ್ನ ತಂದೆಯ ಮೇಲೆ ಹಲ್ಲೆ ನಡೆಸಿದರು. ಈ ಸಂದರ್ಭದಲ್ಲಿ ನನ್ನ ದೊಡ್ಡಪ್ಪ ವಸಂತ್ ಅವರನ್ನು ಚಾಕುವಿನಿಂದ ಚುಚ್ಚಿ ಕೊಲೆ ಮಾಡಲಾಗಿದೆ” ಎಂದು ಸುಮಶ್ರೀ ಕಣ್ಣೀರಿಟ್ಟಿದ್ದಾರೆ. “ನಮ್ಮ ತಾಯಿ ಮುಸ್ಲಿಂ ಯುವಕರೊಂದಿಗೆ ಬಂದಿದ್ದರು. ಅವರು ಹಿಂದಿಯಲ್ಲಿ ‘ಇವನನ್ನು ಬಿಡಬೇಡಿ’ ಎಂದು ನನ್ನ ತಂದೆಯ ವಿರುದ್ಧ ಅವರಿಗೆ ಸೂಚಿಸುತ್ತಿದ್ದರು” ಎಂದು ಗಂಭೀರ ಆರೋಪ ಮಾಡಿದ್ದಾರೆ.

67
ಮಗಳನ್ನು ಕೂಡಿ ಹಾಕಿದ ಪಾಪಿ ತಾಯಿ

ಗಲಾಟೆ ಹೆಚ್ಚಾಗುತ್ತಿದ್ದಂತೆ, “ನನ್ನನ್ನು ಒಂದು ಕೋಣೆಯಲ್ಲಿ ಕೂಡಿ ಹಾಕಿ ಹೊರಗೆ ಬರಬೇಡ ಎಂದು ಹೇಳಿದರು. ದೊಡ್ಡಪ್ಪನನ್ನು ಕೊಲೆ ಮಾಡಿದ ಬಳಿಕ, ನನ್ನ ತಂದೆಗೆ ಚಾಕು ಇರಿದರು. ತಂದೆಯನ್ನು ರಕ್ಷಿಸಲು ಬಂದ ಮತ್ತೊಬ್ಬರ ಮೇಲೂ ಚಾಕು ದಾಳಿ ನಡೆಸಲಾಯಿತು. ನಂತರವೇ ಪೊಲೀಸರು ಸ್ಥಳಕ್ಕೆ ಬಂದರು” ಎಂದು ಸುಮಶ್ರೀ ವಿವರಿಸಿದ್ದಾರೆ.

77
ದೊಡ್ಡಪ್ಪನಿಗೆ ಚಿಕ್ಕ ಚಿಕ್ಕ ಮಕ್ಕಳು ಇದ್ದಾರೆ, ಸುಮಶ್ರೀ ಕಣ್ಣೀರು

“ನನ್ನ ದೊಡ್ಡಪ್ಪನಿಗೆ ಚಿಕ್ಕ ಚಿಕ್ಕ ಮಕ್ಕಳು ಇದ್ದಾರೆ. ಏನೂ ಅರಿಯದ ಮಕ್ಕಳು ಇಂದು ತಬ್ಬಲಿಯಾಗಿದ್ದಾರೆ. ನಮ್ಮ ತಾಯಿಯ ಅನೈತಿಕ ಸಂಬಂಧದ ಪರಿಣಾಮವಾಗಿ ನನ್ನ ದೊಡ್ಡಮ್ಮ ವಿಧವೆಯಾಗಿದ್ದಾರೆ. ಮಕ್ಕಳು ತಂದೆಯನ್ನು ಕಳೆದುಕೊಂಡಿದ್ದಾರೆ. ನನ್ನ ತಂದೆಗೂ ಚಾಕುವಿನ ಏಟು ಬಿದ್ದಿದೆ” ಎಂದು ಈ ಮೂಲಕ ಜ್ಯೋತಿಷಿ ಕಮಲಾಕರ್ ಭಟ್ ಹಾಗೂ ಸುಚಿತ್ರಾ ನಡುವಿನ ಅಕ್ರಮ ಸಂಬಂಧ ಮತ್ತು ಅದರ ಪರಿಣಾಮವಾಗಿ ನಡೆದ ಹಿಂಸಾತ್ಮಕ ಘಟನೆಗಳ ಕುರಿತು ಮಗಳು ಸುಮಶ್ರೀ ಎಳೆ ಎಳೆಯಾಗಿ ಬಹಿರಂಗಪಡಿಸಿದ್ದಾರೆ.

Read more Photos on
click me!

Recommended Stories