ಕ್ರಿ.ಶ. 1050 ರ ಚೋಳರ ಶಾಸನ ಪತ್ತೆ:
'ಎಪಿಗ್ರಾಫಿಯಾ ಕರ್ನಾಟಕ' ಸಂಪುಟ 9 (EC9) ರ ಪ್ರಕಾರ, ಮಂಡಿಗೆರೆಯಲ್ಲಿ ಗ್ರಂಥ ಮತ್ತು ತಮಿಳು ಅಕ್ಷರಗಳಲ್ಲಿ ಕೆತ್ತಲಾದ ಶಾಸನವೊಂದು ಪತ್ತೆಯಾಗಿದೆ. ಕ್ರಿ.ಶ. 1050ರಷ್ಟು ಹಳೆಯದಾದ ಈ ಶಾಸನವು ಪ್ರಸಿದ್ಧ ರಾಜಾಧಿರಾಜ ಚೋಳ-1 (Kovirajakesaripanmar alias Sri-Rajadhiraja-Devar) ನ ಆಳ್ವಿಕೆಯ 33ನೇ ವರ್ಷಕ್ಕೆ ಸೇರಿದೆ.
ಈ ಶಾಸನದಲ್ಲಿ ರಾಜಾಧಿರಾಜನ ತಂದೆಯಾದ ರಾಜೇಂದ್ರ ಚೋಳನು ಉತ್ತರದಲ್ಲಿ ಗಂಗಾ ನದಿ, ದಕ್ಷಿಣದಲ್ಲಿ ಲಂಕಾ (ಇಲಂಗೈ), ಪಶ್ಚಿಮದಲ್ಲಿ ಮಹಾದಾಯಿ ನದಿ ಹಾಗೂ ಪೂರ್ವದಲ್ಲಿ ಕದರಂ (ಮಲೇಷ್ಯಾ) ವಿಜಯ ಸಾಧಿಸಿದ ಬಗ್ಗೆ ಉಲ್ಲೇಖಿಸಲಾಗಿದೆ. ಗಂಗ ಸಮ್ರಾಜ್ಯದ ರಾಜಧಾನಿಯಾಗಿದ್ದ ಮಾನ್ಯಪುರ (ಪ್ರಸ್ತುತ ಮಣ್ಣೆ) ಮತ್ತು ಮಣ್ಣೈ-ನಾಡು ಪ್ರದೇಶದ ಆಡಳಿತದ ಕುರಿತು ಶಾಸನವು ಬೆಳಕು ಚೆಲ್ಲುತ್ತದೆ.