ಗ್ರಾಮದ ಕೆಲ ಯುವಕರು ಮತ್ತು ನಿವಾಸಿಗಳು ಈ ನಿರ್ಧಾರಕ್ಕೆ ಬೆಂಬಲ ಸೂಚಿಸಿದ್ದಾರೆ. ಗ್ರಾಮದ ಸಂಸ್ಕೃತಿ ಮತ್ತು ಕುಟುಂಬದ ಪ್ರತಿಷ್ಠೆಯನ್ನು ಕಾಪಾಡುವುದು ಮುಖ್ಯ ಅನ್ನೋದು ಇವರ ಅಭಿಪ್ರಾಯವಾಗಿದೆ. ಇನ್ನು ಅನೇಕ ನಾಗರಿಕ ಸಂಘಟನೆಗಳು, ನಾಯಕರು ಮತ್ತು ಸಾಂವಿಧಾನಿಕ ಸಂಸ್ಥೆಗಳು ಪಂಚಾಯತ್ನ ಈ ನಡೆಯನ್ನು ವೈಯಕ್ತಿಕ ಸ್ವಾತಂತ್ರ್ಯದ ಉಲ್ಲಂಘನೆ ಎಂದು ಕಟುವಾಗಿ ಟೀಕಿಸಿದ್ದು, ಕಾನೂನಿನ ಪ್ರಕಾರ ಮುಂದೆ ಯಾವ ಕ್ರಮ ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಲಾಗುವುದು ಎಂದಿದ್ದಾರೆ.