ಪಂಚಾಯತಿ ಆದರೂ ಬಿಡದ ಹಠ:
ಈ ವಿಚಾರವಾಗಿ ಗ್ರಾಮದ ಹಿರಿಯರ ಸಮ್ಮುಖದಲ್ಲಿ ಪಂಚಾಯತಿ ಕೂಡ ನಡೆದಿತ್ತು. ಪಂಚಾಯತಿಯಲ್ಲಿ ಉಲ್ಲಾಸ್ ಬಳಿ ಇದ್ದ ಫೋಟೋಗಳನ್ನು ವಾಪಸ್ ಪಡೆದುಕೊಳ್ಳಲಾಗಿತ್ತು. ಆದರೆ, ತನ್ನ ಹಠ ಬಿಡದ ಉಲ್ಲಾಸ್, ಮದುವೆ ಆಗಲಿರುವ ಹುಡುಗನಿಗೆ ನೇರವಾಗಿ ಮಾಹಿತಿ ನೀಡಿ ಮಾನಹಾನಿ ಮಾಡಿದ್ದನು. ಇದರಿಂದ ತೀವ್ರ ನೊಂದ ಕುಟುಂಬ, ಬಾಳೆಹಣ್ಣಿನಲ್ಲಿ ವಿಷದ ಟ್ಯೂಬ್ ಬೆರೆಸಿ ಸೇವಿಸಿ ಸಾವಿಗೆ ಶರಣಾಗಿದೆ. ಸಾವಿಗೂ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದು, ಅದರಲ್ಲಿ ಉಲ್ಲಾಸ್ ಹೆಸರನ್ನು ಉಲ್ಲೇಖಿಸಲಾಗಿದೆ.