ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮುರಡೇಶ್ವರ-ಕಾಚಿಗುಡ ರೈಲನ್ನು ಕುಮಟಾವರೆಗೆ ವಿಸ್ತರಿಸಿ, ಹಸಿರು ನಿಶಾನೆ ತೋರಿದರು. ಈ ವಿಸ್ತರಣೆಯಿಂದ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮತ್ತು ಅಂಕೋಲಾ ಭಾಗದ ಜನರಿಗೆ ಅನುಕೂಲವಾಗಲಿದ್ದು, ವಾರದಲ್ಲಿ ಎರಡು ದಿನ ಈ ರೈಲು ಸಂಚರಿಸಲಿದೆ.
ಇಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕುಮಟಾವರೆಗೂ ವಿಸ್ತರಣೆಯಾಗಿರುವ ಮುರಡೇಶ್ವರ-ಕಾಚಿಗುಡ ರೈಲಿಗೆ ಹಸಿರು ಧ್ವಜ ತೋರಿಸುವ ಮೂಲಕ ಚಾಲನೆ ನೀಡಿದರು. ಉತ್ತರ ಕನ್ನಡ ಜಿಲ್ಲೆಯ ಕುಮಟಾ ರೈಲ್ವೇ ನಿಲ್ದಾಣದಲ್ಲಿ ರೈಲಿಗೆ ಚಾಲನೆ ನೀಡಲಾಯ್ತು.
25
ಕುಮಟಾ ನಿಲ್ದಾಣದವರೆಗೆ ವಿಸ್ತರಣೆ
ಈ ಹಿಂದೆ ಕಾಚಿಗುಡ-ಮುರುಡೇಶ್ವರ ಎಕ್ಸ್ಪ್ರೆಸ್ ಮುರುಡೇಶ್ವರವರೆಗೆ ಮಾತ್ರ ಸೀಮಿತವಾಗಿತ್ತು. ಇದೀಗ ಈ ರೈಲು ಕುಮಟಾ ನಿಲ್ದಾಣದವರೆಗೆ ವಿಸ್ತರಣೆಯಾಗಿರೋದಕ್ಕೆ ಸಂಸದರು ಚಾಲನೆ ನೀಡಿದ್ದರು. ಈ ವಿಸ್ತರಣೆಯಿಂದ ಉತ್ತರ ಕನ್ನಡ ಜಿಲ್ಲೆಯ ಕುಮಟಾ, ಅಂಕೋಲಾ ಭಾಗದ ಜನರಿಗೆ ಅನುಕೂಲವಾಗಲಿದೆ. ವಾರದಲ್ಲಿ ಎರಡು ದಿನ ಈ ರೈಲು ಸಂಚರಿಸಲಿದೆ.
35
ಗೋಕರ್ಣ ನಿಲ್ದಾಣದ ಪ್ಲಾಟ್ಫಾರಂ ಅಭಿವೃದ್ಧಿ
ರೈಲಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಈ ರೈಲು ಕುಮಟಾಗೆ ಬರಬೇಕು ಎಂಬ ಒತ್ತಾಯವವಿತ್ತು. ಶಾಸಕರು ಮತ್ತು ನಮ್ಮ ಪರಿಶ್ರಮದಿಂದ ಜನರ ಬೇಡಿಕೆ ಈಡೇರಿದೆ. ಸುಮಾರು 10 ಕೋಟಿ ರೂ. ವೆಚ್ಚದಲ್ಲಿ ಗೋಕರ್ಣ ನಿಲ್ದಾಣದ ಪ್ಲಾಟ್ಫಾರಂ ಅಭಿವೃದ್ಧಿ ಮಾಡಲಾಗಿದೆ. ಈ ಹಿಂದೆ ಪ್ಲಾಟ್ಫಾರಂ ಚಿಕ್ಕದಾಗಿತ್ತು ಎಂದು ಹೇಳಿದರು.
ಕುಮಟಾ, ಭಟ್ಕಳ ಮತ್ತು ಮುರಡೇಶ್ವರ ರೈಲ್ವೆ ನಿಲ್ದಾಣಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿ ಮಾಡಲಾಗಿದೆ. ಕೆಲವು ಕಡೆ ರೈಲಿನ ಉದ್ದದಷ್ಟು ಪ್ಲಾಟ್ಫಾರಂ ಇರಲಿಲ್ಲ. ಈಗ ಪ್ಲಾಟ್ಫಾರಂಗಳನ್ನು ವಿಸ್ತರಣೆ ಮಾಡಲಾಗಿದೆ. ಕಳೆದ ಎರಡು ವರ್ಷಗಳಲ್ಲಿ ಈ ರೀತಿಯ ಅಭಿವೃದ್ಧಿಯ ಕೆಲಸಗಳನ್ನು ಮಾಡಿದ್ದೇನೆ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ರೈಲು ಸಂಖ್ಯೆ 12790/89 ಕಾಚಿಗುಡ-ಮುರುಡೇಶ್ವರ ಎಕ್ಸ್ಪ್ರೆಸ್
ಕಾಚಿಗುಡ-ಮುರುಡೇಶ್ವರ ಎಕ್ಸ್ಪ್ರೆಸ್ ಬುಧವಾರ ಮತ್ತು ಶನಿವಾರ ಸಂಚರಿಸುತ್ತದೆ. ಈ ರೈಲು ಕರ್ನಾಟಕದಲ್ಲಿ ಕುಮಟಾ, ಮುರಡೇಶ್ವರ, ಭಟ್ಕಳ, ಮೂಕಾಂಬಿಕಾ ರಸ್ತೆ, ಕುಂದಾಪುರ, ಬಾರ್ಕೂರು, ಉಡುಪಿ, ಮುಲ್ಕಿ, ಸುರತ್ಕಲ, ಮಂಗಳೂರು ನಿಲ್ದಾಣಗಳಲ್ಲಿ ನಿಲುಗಡೆಯನ್ನು ಹೊಂದಿದೆ.