ಮುಳ್ಳಯ್ಯನಗಿರಿಯಲ್ಲಿ ಟ್ರಾಫಿಕ್, ಭೂಕುಸಿತ ತಡೆಯಲು ಕ್ರಮ:
ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿ, ದತ್ತಪೀಠ ಭಾಗಕ್ಕೆ ಹೋಗಲು ಇನ್ನುಮುಂದೆ ಜಿಲ್ಲಾಡಳಿತದ ಅನುಮತಿ ಪಡೆಯುವುದು ಕಡ್ಡಾಯ ಆಗಲಿದೆ. ಇದರಿಂದ ಮುಳ್ಳಯ್ಯನ ಗಿರಿ ಭಾಗದಲ್ಲಿ ಉಂಟಾಗುತ್ತಿದ್ದ ವಾಹನಗಳ ಟ್ರಾಫಿಕ್ ಜಾಮ್, ಭೂ ಕುಸಿತದ ಆತಂಕವನ್ನು ತಡೆಗಟ್ಟಲು ನೆರವಾಗಲಿದೆ. ಮುಳ್ಳಯ್ಯನಗಿರಿಗೆ ನಿತ್ಯ ಸಾವಿರಾರು ವಾಹನಗಳಲ್ಲಿ ಬರುವ ಪ್ರವಾಸಿಗರು ಈ ಜಿಲ್ಲಾಡಳಿತದ ಕ್ರಮವನ್ನು ನೋಡಿಕೊಂಡು ಹೋದರೆ ಅನುಕೂಲಕರ ಆಗಲಿದೆ. ಇಲ್ಲದಿದ್ದರೆ ಚಿಕ್ಕಮಗಳೂರಿನ ಗಿರಿ ಪ್ರದೇಶ ನೋಡಲಾಗದೇ ಸಪ್ಪೆ ಮೋರೆ ಹೊತ್ತು ಸಮಯ ವ್ಯರ್ಥ ಮಾಡಿಕೊಂಡು ವಾಪಸ್ ಬರಬೇಕಾಗುತ್ತದೆ.