ಲಾಕ್‌ಡೌನ್‌ ಎಫೆಕ್ಟ್‌: ಹೊಲದಲ್ಲಿ ರಂಟೆ ಹೊಡೆದ ಶಾಸ​ಕ ಬಸವರಾಜ ದಡೇಸ್ಗೂರು..!

First Published May 11, 2020, 10:38 AM IST

ಕನಕಗಿರಿ(ಮೇ.11): ಕೊರೋನಾ ಕು​ರಿ​ತಂತೆ ಜಾಗೃತಿ ಮೂಡಿ​ಸ​ಲು ತೆರಳಿದ್ದ ಶಾಸಕ ಬಸವರಾಜ ದಡೇಸ್ಗೂರು ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಗೋಡಿನಾಳ ಸೀಮಾದ ಬಳಿ ಭಿತ್ತನೆ ಮಾಡುತ್ತಿದ್ದ ರೈತರೊಬ್ಬರ ಜಮೀನಿಗೆ ತೆರಳಿ ರಂಟೆ ಹೊಡೆದಿದ್ದಾರೆ. ಸದ್ಯ ಈ ವಿಡಿಯೋ ಸಾಮಾ​ಜಿಕ ಜಾಲ​ತಾ​ಣ​ದಲ್ಲಿ ಭಾರೀ ವೈರಲ್‌ ಆಗಿದೆ.

ಲಾಕ್‌ಡೌನ್‌ ನಿಯಮಗಳ ಪಾಲನೆ ಹಾಗೂ ಕೊರೋನಾ ಸೋಂಕಿನ ಬಗ್ಗೆ ಕ್ಷೇತ್ರ ವ್ಯಾಪ್ತಿ ಸಂಚಾರ ಕೈಗೊಂಡ ಶಾಸಕ ದಡೇಸ್ಗೂರು
undefined
ಸ್ವತಃ ತಾವೇ ಕೃಷಿ ಚಟುವಟಿಕೆ ಮಾಡುತ್ತ ಉತ್ತಮ ಬೆಳೆ ಬೆಳೆಯುವಂತೆ ರೈತರಿಗೆ ಪ್ರೋತ್ಸಾಹಿಸುತ್ತಿರುವ ಬಸವರಾಜ ದಡೇಸ್ಗೂರು ಶಾಸಕ
undefined
ರೈತರೊಬ್ಬರ ಜಮೀನಿನಲ್ಲಿ ರಂಟೆ ಹೊಡೆದು ಗಮನ ಸೆಳೆದ ಶಾಸಕ
undefined
ಮೊದಲಿನಿಂದಲೂ ನಾನು ಕೃಷಿಕ. ಕೃಷಿಯ ಬಗ್ಗೆ ಬಹಳ ಅನುಭವವಿದೆ. ರೈತರ ಮೇಲೆ ಇರುವ ಪ್ರೀತಿ, ಅಭಿಮಾನಕ್ಕಾಗಿ ನಾನು ರಂಟೆ, ಕುಂಟೆ ಹೊಡೆದಿದ್ದೇನೆ, ಹೊರತು ರಾಜಕಾರಣಿಯಾಗಿ ಅಲ್ಲ ಎಂದಶಾಸಕ
undefined
click me!