ಕಾರ್ಯಕ್ರಮದ ಬಳಿಕ ಸಚಿವ ಕೆ.ಎಸ್.ಈಶ್ವರಪ್ಪ ರಾಜೀನಾಮೆ ವಿಚಾರ ಸಂಬಂಧಿಸಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಇದು ಗ್ರಾಮ ವಾಸ್ತವ್ಯ, ಇದರ ಬಿಟ್ಟು ಬೇರೇನೂ ಮಾತನಾಡಲ್ಲ.ಈಶ್ವರಪ್ಪ ವಿಚಾರ ಸಂಬಂಧಿಸಿ ಉತ್ತರಿಸಲು ಸಿಎಂ ಇದ್ದಾರೆ ಎಂದು ಕೈ ಮುಗಿದು ತೆರಳಿದರು. ಕುಮಟಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾದ ಬಳಿಕ ನೇರವಾಗಿ ಅಂಕೋಲಾದ ಅಚಿವೆಗೆ ತೆರಳಿದ ಕಂದಾಯ ಸಚಿವರಿಗೆ ಭರ್ಜರಿ ಸ್ವಾಗತ ದೊರಕಿದೆ. ಸುಮಾರು 200 ಮೀಟರ್ ನಡೆದ ಮೆರವಣಿಗೆಯಲ್ಲಿ ಟ್ರ್ಯಾಕ್ಟರ್ ಮೇಲೆ ನಿಂತುಕೊಂಡು ಕಾರ್ಯಕ್ರಮದ ಸ್ಥಳಕ್ಕೆ ಸಚಿವರು ಆಗಮಿಸಿದರು. ಸಚಿವರಿಗೆ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್, ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ದಿನಕರ ಶೆಟ್ಟಿ, ರೂಪಾಲಿ ನಾಯ್ಕ್, ಎಂಎಲ್ಸಿ ಶಾಂತರಾಮ ಸಿದ್ಧಿ, ಜಿಲ್ಲಾಧಿಕಾರಿ ಮುಲೈ ಮುಹಿಲನ್, ಸಿಇಒ ಪ್ರಿಯಾಂಗಾ, ಎಸಿ ರಾಹುಲ್ ಪಾಂಡೆ ಸಾಥ್ ನೀಡಿದರು.