ಕೃಷ್ಣನೂರಲ್ಲಿ ಕೊರೋನಾಸುರ ಪ್ರತ್ಯಕ್ಷ: ಸುಮ್‌ ಸುಮ್ನೆ ಓಡಾಡ್ತಿದ್ದವ್ರಿಗೆ ಶಾಕ್..!

First Published Apr 28, 2020, 9:21 AM IST

ಕೊರೋನಾದ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಸೋಮವಾರ ಉಡುಪಿಯಲ್ಲಿ ಸ್ವತಃ ಕೊರೋನಾಸುರನೇ ಪ್ರತ್ಯಕ್ಷನಾಗಿದ್ದ. ಇದರಿಂದ ನಗರದ ಮಾರುಥಿ ವೀಥಿಕಾ ರಸ್ತೆಯಲ್ಲಿ ದಿನಸಿ ಇತ್ಯಾದಿಗಳನ್ನು ಕೊಳ್ಳಲು ಬಂದಿದ್ದ ಗ್ರಾಹಕರು ಬೆಚ್ಚಿಬಿದ್ದರು. ಇಲ್ಲಿವೆ ಫೋಟೋಸ್

ಕೊರೋನಾದ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಸೋಮವಾರ ಉಡುಪಿಯಲ್ಲಿ ಸ್ವತಃ ಕೊರೋನಾಸುರನೇ ಪ್ರತ್ಯಕ್ಷನಾಗಿದ್ದ.
undefined
ಇದರಿಂದ ನಗರದ ಮಾರುಥಿ ವೀಥಿಕಾ ರಸ್ತೆಯಲ್ಲಿ ದಿನಸಿ ಇತ್ಯಾದಿಗಳನ್ನು ಕೊಳ್ಳಲು ಬಂದಿದ್ದ ಗ್ರಾಹಕರು ಬೆಚ್ಚಿಬಿದ್ದರು.
undefined
ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು ಅವರು ಕೊರೋನಾ ಸೋಂಕಿನ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಈ ಕೊರೊನಾಸುರ ಅಟ್ಟಹಾಸ ಎನ್ನುವ ಅಣುಕು ಪ್ರದರ್ಶನವನ್ನು ನಡೆಸಿದರು.
undefined
ಬೀದಿಬೀದಿಗಳಲ್ಲಿ ಸಂಚರಿಸಿ ಕೊರೋನಾಸುರನ ವೇಷದ ಮೂಲಕ ಅವರು ಕೊರೋನಾ ಹೇಗೆ ಜನರನ್ನು ಬಲಿ ತೆಗೆದುಕೊಳ್ಳುತ್ತದೆ ಎಂದು ತೋರಿಸಿದರು.
undefined
ಲಾಕ್‌ಡೌನ್ ನಿಯಮ ಪಾಲನೆ ಮಾಡದವರನ್ನು ತಾನು ಬಲಿ ತೆಗೆದುಕೊಳ್ಳುವುದಾಗಿ ಎಚ್ಚರಿಸಿದರು.
undefined
ಕೊರೋನಾಸುರನನ್ನು ಸೃಷ್ಟಿಸಿದ ತಂಡ
undefined
ಭೀಕರ ಈ ಕೊರೋನಾಸುರ, ರಸ್ತೆಯ ತುಂಬೆಲ್ಲ ಓಡಾಡಿ ಜನರಲ್ಲಿ ಜಾಗೃತಿ ಮೂಡಿಸಲಾಯಿತು
undefined
ಮುಖಕ್ಕೆ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ, ಪ್ರತಿಯೊಂದು ಕಡೆ ಸಾಮಾಜಿಕ ಅಂತರ ಕಾಪಾಡುವಂತೆ, ಪೊಲೀಸ್‌ ಇಲಾಖೆ, ಆರೋಗ್ಯ ಇಲಾಖೆಗಳ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಹೇಳಿದರು.
undefined
click me!