ಮಾರಕ ಕೊರೋನಾ ಬಗ್ಗೆ ಜಾಗೃತಿ ಮೂಡಿಸಲು ಮುಂದಾದ ಕಲಾವಿದ: ಚಮ್ಮಾರನಿಗೆ ಒಲಿದ 'ಮೌತ್‌ ಆರ್ಟ್‌'

First Published Apr 27, 2020, 10:00 AM IST

ದಾವಣಗೆರೆ(ಏ.27): ಇಡೀ ವಿಶ್ವವನ್ನೇ ಕಾಡುತ್ತಿರುವ ಮಹಾಮಾರಿ ಕೊರೋನಾ ವೈರಸ್‌ ನಿಯಂತ್ರಿಸಲು ಜಿಲ್ಲೆಯಲ್ಲಿ ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿರುವ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರ ಚಿತ್ರವನ್ನ ಎರಡು ತಾಸಿನಲ್ಲಿ ಬಿಡಿಸುವ ಮೂಲಕ ಜಯಕುಮಾರ ಸಾಣಿಕೆ ಎಂಬ ಯುವಕ ಗಮನ ಸೆಳೆದಿದ್ದಾನೆ. ಇನ್ನು ಕೊರೋನಾ ವೈರಸ್‌ ಬಗ್ಗೆ ಮೌತ್‌ ಆರ್ಟ್‌ ಮೂಲಕ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಯಕುಮಾರ ಯೋಜನೆಯೊಂದನ್ನ ರೂಪಿಸಿದ್ದಾರೆ. 

ಚಮ್ಮಾರಿಕೆ ಕುಲಕಸುಬನ್ನು ಶ್ರದ್ಧೆಯಿಂದ ಮಾಡುತ್ತಿರುವ ಜಿಲ್ಲೆಯ ಹರಿಹರ ಪಟ್ಟಣದ ಜಯಕುಮಾರ ಸಾಣಿಕೆ
undefined
ತನ್ನ ಮೌತ್‌ ಆರ್ಟ್‌ ಮೂಲಕ ಗಮನ ಸೆಳೆದ ಬಿಎಸ್‌ಸಿ ಪದವಿ ಪೂರೈಸಿದ ಜಯಕುಮಾರ
undefined
ಬಾಲ್ಯದಿಂದಲೂ ಕಲೆಯಲ್ಲಿ ಆಸಕ್ತಿ ಹೊಂದಿರುವ ಜಯಕುಮಾರ ತನ್ನ ಕುಲಕಸುಬಿನ ಜೊತೆಗೆ ಕೈಯಲ್ಲಿ ಚಿತ್ರ ಬಿಡಿಸುವ ಮೂಲಕ ಟ್ಯಾಟೂ ಹಾಕುವ ಜೊತೆಗೆ ರಂಗೋಲಿ ಕಲೆಯಲ್ಲೂ ಹೆಸರಾದ ಯುವ ಸಾಧಕ
undefined
ತಂದೆಯ ಅಗಲಿಕೆಯ ನಂತರ ತಾಯಿಗೆ ಜೊತೆಯಾಗಿ ಚಪ್ಪಲಿ ರಿಪೇರಿ ಅಂಗಡಿ ಜವಾಬ್ದಾರಿ ಹೊತ್ತ ಜಯಕುಮಾರ
undefined
ಪ್ರತಿದಿನ 300-400 ರು. ದುಡಿಯುವ ಜಯಕುಮಾರಗೆ ಕಲೆ ಮಾತ್ರ ಎಂದಿಗೂ ಕೈ ಬಿಟ್ಟಿಲ್ಲ
undefined
ಹರಿಹರಕ್ಕ ಕಾರ್ಯಕ್ರಮಕ್ಕೆ ಬಂದಿದ್ದ ನಟ ಉಪೇಂದ್ರ ಅವರಿಗೆ ತಾನು ಬಿಡಸಿದ್ದ ಚಿತ್ರ ಕೊಟ್ಟಿದ್ದ ಕಲಾವಿದ
undefined
ಜಯಕುಮಾರ ಕೈಯಲ್ಲಿ ಅರಳಿದ ಡಾ. ಬಿ. ಆರ್. ಅಂಬೇಡ್ಕರ್, ಪ್ರಧಾನಿ ಮೋದಿ, ರಾಷ್ಟ್ರಕವಿ ಕುವೆಂಪು, ಡಾ. ರಾಜಕುಮಾರ್, ಪುನೀತ್‌ ರಾಜಕುಮಾರ, ನಟ ಉಪೇಂದ್ರ , ಕಿಚ್ಚ ಸುದೀಪ್‌ ಸೇರಿದಂತೆ ಇನ್ನೂ ಅನೇಕ ಸಾಧಕರು
undefined
ಚಿತ್ರನಟ ಪುನಿತ ರಾಜಕುಮಾರ ನಿವಾಸಕ್ಕೆ ತೆರಳಿ ತಾನು ಬಿಡಿಸಿದ್ದ ಚಿತ್ರ ಕೊಟ್ಟ ಜಯಕುಮಾರ
undefined
ಕೊರೋನಾ ವೈರಸ್‌ ವಿರುದ್ಧ ವಿನೂತನವಾಗಿ ಜಾಗೃತಿ ಮೂಡಿಸಲು ಮುಂದಾದ ಜಯಕುಮಾರ ಸಾಣಿಕೆ
undefined
ಬಹುಮುಖ ಪ್ರತಿಭೆ ಜಯಕುಮಾರಗೆ ಪ್ರೋತ್ಸಾಹದ ಅಗತ್ಯವೂ ಇದೆ. ಮಾಹಿತಿಗೆ ಜಯಕುಮಾರ ಸಾಣಿಕೆ(ಮೊ.9844428807) ಸಂಪರ್ಕಿಸಬಹುದು
undefined
click me!