ಬೆಳಗಾವಿಯ ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಬರಿಗಾಲಿನಲ್ಲಿಯೇ ನೂರಾರು ಕಿಲೋ ಮೀಟರ್ ಪಾದಯಾತ್ರೆ ಮಾಡಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ವೆಂಕಟಾದ್ರಿ ಗಿರಿಶ್ರೇಣಿಯ 2388 ಮೆಟ್ಟಿಲುಗಳನ್ನು ಏರಿ
ಪ್ರಾತಃಕಾಲದಲ್ಲಿ ತಿರುಮಲ ವೆಂಕಟರಮಣನ ದರ್ಶನ ಪಡೆದಿದ್ದಾರೆ. ಈ ದರ್ಶನ ನನ್ನಲ್ಲಿ ಹುಟ್ಟಿಸಿದ ಆಧ್ಯಾತ್ಮಿಕ ಅನುಭೂತಿ, ಮನದಲ್ಲಿ ಸ್ಫುರಿಸಿದ ಭಾವಗಳು ಪದಗಳ ಮೂಲಕ ಬಣ್ಣನೆಗೆ ನಿಲುಕುತ್ತಿಲ್ಲ ಎಂದಿದ್ದಾರೆ.