ಬೌಂಡರಿ ದಾಟಿದ ಸಾಧಕ
ಜ್ಯೋತಿರಾಜ್ ಕೇವಲ ಕೋಟೆ ಹತ್ತುವ ಸಾಹಸಿಗ ಮಾತ್ರವಲ್ಲ. ಒಡಿಶಾ ರಾಜ್ಯದ 'ಸಾಹಸ ಕ್ರೀಡೆಗಳ ರಾಯಭಾರಿ'ಯಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಸಾರ್ವಜನಿಕ ಚುನಾವಣೆಗಳ ಸಂದರ್ಭದಲ್ಲಿ ಜಾಗೃತಿ ಮೂಡಿಸಲು ಮತದಾನದ ರಾಯಭಾರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಇವರ ಜೀವನಾಧಾರಿತ ಕಥೆಯನ್ನು ಆಧರಿಸಿ ಕನ್ನಡದಲ್ಲಿ 'ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್' ಎಂಬ ಚಲನಚಿತ್ರವೂ ನಿರ್ಮಾಣವಾಗಿ ತೆರೆಕಂಡಿತ್ತು.
ಚಿತ್ರದುರ್ಗದ ಕಲ್ಲಿನ ಕೋಟೆಗೆ ವಿಶ್ವಮಟ್ಟದಲ್ಲಿ ಹೆಸರು ತಂದುಕೊಟ್ಟ ಈ ಅಪ್ರತಿಮ ಸಾಹಸಿಯ ಮದುವೆಗೆ ಹಲವು ರಾಜಕೀಯ ಧುರೀಣರು, ಸಾಮಾಜಿಕ ಮುಖಂಡರು ಹಾಗೂ ಗಣ್ಯರು ನೆರವಿನ ಹಸ್ತ ಚಾಚಿದ್ದು, ಶುಭ ಹಾರೈಸಿದ್ದಾರೆ.