ಕಲಬುರಗಿ ಜಿಲ್ಲೆಯ ಚಿಂಚೊಳ್ಳಿಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಚಿಮ್ಮನಚೋಡ - ನರನಾಳ್ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಕುಸಿತವಾಗಿದೆ. ಸೇತುವೆ ಕುಸಿತಕ್ಕೆ ಕಳಪೆ ಕಾಮಗಾರಿ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಕಲಬುರಗಿ ಜಿಲ್ಲೆಯ ಚಿಂಚೊಳ್ಳಿಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಚಿಮ್ಮನಚೋಡ - ನರನಾಳ್ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಕುಸಿತವಾಗಿದೆ. ಇದರಿಂದ ಎರಡು ಗ್ರಾಮಗಳ ನಡುವಿನ ಸಂಪರ್ಕ ಕಡಿತಗೊಂಡಿದೆ. ಸೇತುವೆ ಕುಸಿತದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
23
ಕಳಪೆ ಕಾಮಗಾರಿಯ ಆರೋಪ
ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಚಿಮ್ಮನಚೋಡ ಗ್ರಾಮದ ಬಳಿಯಲ್ಲಿ ಸೇತುವೆ ಕುಸಿತವಾಗಿದೆ. ಗ್ರಾಮಸ್ಥರು ಸೇತುವೆ ಕುಸಿತದ ದೃಶ್ಯಗಳನ್ನು ಮೊಬೈಲ್ನಲ್ಲಿ ಸರೆಹಿಡಿದುಕೊಂಡಿದ್ದಾರೆ. ಸೇತುವೆ ಕುಸಿತಕ್ಕೆ ಕಳಪೆ ಕಾಮಗಾರಿ ಎಂದು ಸ್ಥಳೀಯರು ಆರೋಪಿಸಿದ್ದಾರೆ.
33
ತಪ್ಪಿದ ದೊಡ್ಡ ಅನಾಹುತ
ಬೀದರ್ನ ಹುಮ್ನಾಬಾದ್ ಮೂಲಕ ಚಿಂಚೋಳಿಗೆ ಹೊರಟಿದ್ದ ಬಸ್ ಕೆಲವೇ ಕ್ಷಣದಲ್ಲಿ ರಸ್ತೆ ದಾಟಬೇಕಾಗಿತ್ತು. ಆದರೆ, ದಿಢೀರ್ ರಸ್ತೆ ಕುಸಿದ ಪರಿಣಾಮ ಚಾಲಕ ಬ್ರೇಕ್ ಹಾಕಿ ಅನಾಹುತ ತಪ್ಪಿಸಿದ್ದಾನೆ. ಒಂದು ವೇಳೆ ಬಸ್ ಸೇತುವೆ ಮೇಲೆ ಸಂಚರಿಸಿದ್ರೆ ದೊಡ್ಡ ಅನಾಹುತ ಉಂಟಾಗುತ್ತಿತ್ತು.