ನಮ್ಮ ಅಕ್ಕ ಗಂಗಮ್ಮ ಮತ್ತು ಮಾವ ಮಹಾಂತೇಶ್ ಇಬ್ಬರಿಗೂ ಮೊದಲಿನಿಂದಲೂ ಜಗಳ ನಡೆಯುತ್ತಿತ್ತು. ನಮ್ಮ ಅಕ್ಕನಿಗೆ ಅನೇಕ ಬಾರಿ ಆಕೆಯ ಪತಿ ಹಿಂಸೆ ನೀಡಿದ್ದಾನೆ. ನಮ್ಮ ಅಕ್ಕ ನಿನ್ನೆ ಎಲ್ಲೂ ಹೊರಗಡೆ ಹೋಗಿಲ್ಲ, ಮನೇಲೆ ಇದ್ದರು. ಮಾವ ಹಾಗೂ ಆತನ ಕುಟುಂಬಸ್ಥರಿಂದ ಕೊಲೆ ಪ್ರಯತ್ನ ನಡೆದಿದೆ.
ಇದೀಗ ಕೊಲೆ ಯತ್ನ ಪ್ರಕರಣವನ್ನ ತಿರುಚುವ ಸಂಚು ಮಾಡುತ್ತಿದ್ದಾರೆ. ಈ ಪ್ರಕರಣದ ಕುರಿತು ಸೂಕ್ತ ತನಿಖೆ ನಡೆಸಬೇಕು. ಪೊಲೀಸ್ ಇಲಾಖೆ ಪ್ರಕರಣ ದಾಖಲಿಸಿಕೊಂಡು ಸೂಕ್ತ ತನಿಖೆ ನಡೆಸಿದರೆ ಮಾತ್ರ ಸತ್ಯಾಸತ್ಯತೆ ಹೊರಬರಲಿದೆ ಎಂದು ಆಗ್ರಹ ಮಾಡಿದ್ದಾರೆ.