ವಿಶೇಷವೆಂದರೆ, ಈ ಕಳಪೆ ಕಾಮಗಾರಿ ನಡೆದಿರುವುದು ಬೇರೆಲ್ಲೂ ಅಲ್ಲ, ಸಾಕ್ಷಾತ್ ಸಣ್ಣ ನೀರಾವರಿ ಇಲಾಖೆಯ ಕಚೇರಿಯ ಹಿಂಭಾಗದಲ್ಲೇ!
ಕಾಮಗಾರಿಯ ಹಿನ್ನೆಲೆ ಏನು?
ಹಾನಗಲ್ ಪಟ್ಟಣದ ಪ್ರಸಿದ್ಧ ಆನಿಕೆರೆ ಕೋಡಿ ಬಿದ್ದಾಗ ಆ ನೀರು ಮತ್ತೊಂದು ಕೆರೆಗೆ ಸರಾಗವಾಗಿ ಹರಿದು ಹೋಗಲು ಈ ಹಿಂದೆ ಕಚ್ಚಾ ಕಾಲುವೆ ಇತ್ತು. ಇದರಿಂದ ಮಳೆಗಾಲದಲ್ಲಿ ನೀರು ಪಕ್ಕದ ರೈತರ ಜಮೀನುಗಳಿಗೆ ನುಗ್ಗಿ ಬೆಳೆ ಹಾನಿಯಾಗುತ್ತಿತ್ತು.
ರೈತರ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಸರ್ಕಾರ ₹5 ಕೋಟಿ ಅನುದಾನ ಮಂಜೂರು ಮಾಡಿತ್ತು.
ಒಟ್ಟು 1.3 ಕಿಲೋಮೀಟರ್ ಉದ್ದದ ಕಾಂಕ್ರೀಟ್ ರಾಜಕಾಲುವೆ ನಿರ್ಮಿಸಲು ಯೋಜನೆ ರೂಪಿಸಲಾಗಿತ್ತು.
ಈ ಗುತ್ತಿಗೆಯನ್ನು ಸುಮಿತ್ ಹೆಗಡೆ ಎಂಬ ಗುತ್ತಿಗೆದಾರನಿಗೆ ವಹಿಸಲಾಗಿತ್ತು.