ಮುಂಚಿತವಾಗಿ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದೇಕೆ GT ದೇವೇಗೌಡ: ಸಾ.ರಾ.ಮಹೇಶ್ ಕಿಡಿ

Published : May 16, 2026, 01:02 PM IST

ಮಾಜಿ ಸಚಿವ ಸಾ.ರಾ ಮಹೇಶ್ ಅವರು ಮೈಸೂರಿನಲ್ಲಿ ಜಿ.ಟಿ.ದೇವೇಗೌಡರ ವಿರುದ್ಧ ವಾಗ್ದಾಳಿ ನಡೆಸಿದ್ದು, ಅವರ ತಂತ್ರಗಳು ನಮಗೆ ಅರ್ಥವಾಗುತ್ತವೆ ಎಂದಿದ್ದಾರೆ. ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ ಎಂದು ಹೇಳುವ ಮೂಲಕ, ಜಿ.ಟಿ.ಡಿ ಅವರಿಂದ ಪಕ್ಷಕ್ಕೆ ದೊಡ್ಡ ನಷ್ಟವಾಗಿದೆ ಎಂದು ಆರೋಪಿಸಿದ್ದಾರೆ.

PREV
14
ಜಿ.ಟಿ.ದೇವೇಗೌಡರ ವಿರುದ್ಧ ವಾಗ್ದಾಳಿ

ಮೈಸೂರು: ಮಾಜಿ ಸಚಿವ ಜಿ.ಟಿ.ದೇವೇಗೌಡರ ತಂತ್ರಗಳೆಲ್ಲಾ ನಮಗೆ ಅರ್ಥವಾಗುತ್ತವೆ ಎಂದು ಮೈಸೂರಿನಲ್ಲಿ ಮಾಜಿ ಸಚಿವ ಸಾ.ರಾ ಮಹೇಶ್ ಹೇಳಿಕೆ ನೀಡಿದ್ದಾರೆ. ಪಕ್ಷಕ್ಕಿಂತ ನಮಗೆ ದೊಡ್ಡವರು ಯಾರು ಇಲ್ಲ ಎಂದು ಪರೋಕ್ಷವಾಗಿ ಜಿ.ಟಿ.ದೇವೇಗೌಡರ ವಿರುದ್ಧ ವಾಗ್ದಾಳಿ ನಡೆಸಿದರು.

24
ಸಾ.ರಾ.ಮಹೇಶ್ ಟಾಂಗ್

ಜೆಡಿಎಸ್ ಪಕ್ಷದಲ್ಲಿ ರಾಷ್ಟ್ರೀಯ ನಾಯಕರು ಹಚ್‌ಡಿ.ದೇವೇಗೌಡರು, ರಾಜ್ಯ ನಾಯಕರು ಹೆಚ್.ಡಿ.ಕುಮಾರಸ್ವಾಮಿ, ಮೈಸೂರು ನಾಯಕರು ಜಿಟಿ.ದೇವೇಗೌಡ ಇದ್ದರು. ಈಗ ರಾಷ್ಟ್ರೀಯ ನಾಯಕರು ಹೆಚ್.ಡಿ.ದೇವೇಗೌಡ, ರಾಜ್ಯ ನಾಯಕರು ಹೆಚ್‌ಡಿ.ಕುಮಾರಸ್ವಾಮಿ ಅಷ್ಟೇ ಎಂದು ಸಾ.ರಾ.ಮಹೇಶ್ ಟಾಂಗ್ ಕೊಟ್ಟರು.

34
ಪಕ್ಷಕ್ಕಿಂತ ನಮಗೆ ದೊಡ್ಡವರು ಯಾರು ಇಲ್ಲ

ಜಿ.ಟಿ ದೇವೇಗೌಡರಿಂದ ನಮ್ಮ ಪಕ್ಷಕ್ಕೆ ಬಹಳ ದೊಡ್ಡ ನಷ್ಟವಾಗಿದೆ ಎಂದ ಸಾ.ರಾ.ಮಹೇಶ್, ಅವರು ಒಂದೊಂದು ಚುನಾವಣೆಗೆ ಒಂದೊಂದು ತೀರ್ಮಾನ ಮಾಡುತ್ತಾರೆ. ಜಿ.ಟಿ.ದೇವೇಗೌಡ ಅವರ ತೀರ್ಮಾನಗಳಿಂದ ಕಾರ್ಯಕರ್ತರಿಗೆ ಅಘಾತವಾಗಿದೆ. ಪಕ್ಷಕ್ಕಿಂತ ನಮಗೆ ದೊಡ್ಡವರು ಯಾರು ಇಲ್ಲ ಎಂದು ಹೇಳಿದರು.

ಇದನ್ನೂ ಓದಿ: ಮಕ್ಕಳು ಕೇಸರಿ ಶಾಲು ಹಾಕಬೇಕು ಎನ್ನುವ ಬಿಜೆಪಿಗರು ತಮ್ಮ ಮಕ್ಕಳಿಗೇಕೆ ಹಾಕ್ಸಲ್ಲ? ಮಧು ಬಂಗಾರಪ್ಪ ಕಿಡಿ

44
ಸಾಮೂಹಿಕ ನಾಯಕತ್ವ

ಪಕ್ಷಕ್ಕೆ ನಿಷ್ಟಾವಂತ ಕಾರ್ಯಕರ್ತರ ಅನುವಾರ್ಯತೆ ಇದೆ ಹೊರತು ಇಂತಹ ನಾಯಕರ ಅನುವಾರ್ಯತೆ ಇಲ್ಲ. ಪಕ್ಷ ಜಿ.ಟಿ ದೇವೇಗೌಡರಿಗೆ ಎಲ್ಲಾ ಅಧಿಕಾರ ಕೊಟ್ಟಿತ್ತು. ಆದರೆ ಅವರು ಪಕ್ಷಕ್ಕೆ ಮೋಸ ಮಾಡಿದರು. ಈ ಕಾರಣ ಈ ಭಾಗದಲ್ಲಿ ಸಾಮೂಹಿಕ ನಾಯಕತ್ವ ಕಟ್ಟಿಕೊಂಡಿದ್ದೇವೆ ಎಂದು ಸಾ.ರಾ.ಮಹೇಶ್ ಹೇಳಿದರು.

ನಾಳೆ ಮೈಸೂರಿನ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಸಮಾವೇಶ ಇದೆ. ಈ ಕಾರಣ ದೊಡ್ಡ ದೇವೇಗೌಡರಿಗೆ ಹೋಗಿ ಹುಟ್ಟಿದ ಹಬ್ಬಕ್ಮಿಂತ ಮುಂಚೆಯೇ ಶುಭಾಶಯ ತಿಳಿಸಿದ್ದಾರೆ. ಈ ಎಲ್ಲಾ ತಂತ್ರಗಳು ನಮಗೆ ಅರ್ಥವಾಗುತ್ತದೆ ಎಂದರು.

ಇದನ್ನೂ ಓದಿ: NEET Scam: ಬಿಜೆಪಿಗರು ನೀಟ್‌ ವಿದ್ಯಾರ್ಥಿಗಳ ಕಾಲಿಗೆ ಬಿದ್ದು ಕ್ಷಮೆ ಕೇಳಲಿ: ಮಧು ಬಂಗಾರಪ್ಪ

Read more Photos on
click me!

Recommended Stories