ಉಡುಪಿ ಬ್ರಹ್ಮಾವರದಲ್ಲಿ ತಡರಾತ್ರಿ ಹೊತ್ತಿ ಉರಿದ ಕಾಡು..!

First Published May 2, 2020, 2:59 PM IST

ಉಡುಪಿಯ ಬ್ರಹ್ಮಾವರ ತಾಲೂಕಿನ ಮಟಪಾಡಿಯ ರೈಲ್ವೆ ಹಳಿಯ ಪಕ್ಕದಲ್ಲಿ ಗುಡ್ಡೆಯ ಒಣಹುಲ್ಲಿಗೆ ಗುರುವಾರ ತಡರಾತ್ರಿ ಬೆಂಕಿ ತಗಲಿ, ಎಕರಗೆಟ್ಟಲೇ ಹರಡಿ ಕೆಲಕಾಲ ಸ್ಥಳೀಯ ಪರಿಸರದಲ್ಲಿ ಆತಂಕದ ವಾತಾವರಣ ಉಂಟಾಗಿತ್ತು. ಇಲ್ಲಿವೆ ಚೇತು ಮಟಪಾಡಿ ಅವರು ಕ್ಲಿಕ್ಕಿಸಿದ ಫೋಟೋಸ್

ಉಡುಪಿಯಬ್ರಹ್ಮಾವರ ತಾಲೂಕಿನ ಮಟಪಾಡಿಯ ರೈಲ್ವೆ ಹಳಿಯ ಪಕ್ಕದಲ್ಲಿ ಗುಡ್ಡೆಯ ಒಣಹುಲ್ಲಿಗೆ ಗುರುವಾರ ತಡರಾತ್ರಿ ಬೆಂಕಿ ತಗಲಿ, ಎಕರಗೆಟ್ಟಲೇ ಹರಡಿ ಕೆಲಕಾಲ ಸ್ಥಳೀಯ ಪರಿಸರದಲ್ಲಿ ಆತಂಕದ ವಾತಾವರಣ ಉಂಟಾಗಿತ್ತು.
undefined
ಸುತ್ತಮುಲ್ಲಿನ ಪ್ರದೇಶದಲ್ಲಿ ಏಕಾಏಕಿ ದಟ್ಟ ಹೊಗೆ ತುಂಬಿ ಜನರು ಗಾಬರಿಗೊಂಡರು. ಈ ಬೆಂಕಿ ಆಕಸ್ಮಿಕಕ್ಕೆ ಕಾರಣ ತಿಳಿದು ಬಂದಿಲ್ಲ.
undefined
ಈ ಬಗ್ಗೆ ಮಾಹಿತಿ ಪಡೆದ ಉಡುಪಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಬಂದು ಬೆಂಕಿಯನ್ನು ನಂದಿಸಿದ್ದಾರೆ
undefined
ಕೆಲಹೊತ್ತಿನ ನಂತರ ಇನ್ನೊಂದು ಭಾಗದಲ್ಲಿ ಬೆಂಕಿ ಹರಡಿತು.
undefined
ಬೆಂಕಿ ನಂದಿಸಲು ಬಂದ ಸಿಬ್ಬಂದಿ ಬೆಂಕಿ ನಂದಿಸಿ ಹೋದ ಬಳಿಕ ಬೇರೆಡೆಯೂ ಬೆಂಕಿ ಕಾಣಿಸಿಕೊಂಡಿತ್ತು
undefined
ಈ ಸಂದರ್ಭದಲ್ಲಿ ಸ್ಥಳೀಯ ಯುವಕರಾದ ಚೇತನ್ ಪೂಜಾರಿ, ಶ್ರೀನಿಧಿ, ಮನೋಜ್ ನಾಯಕ್, ಮಹಮದ್ ಜಾಕಿ, ಕಿರಣ್ ನಾಯಕ್, ಅನುಷ್ ಪೂಜಾರಿ , ಶರೊನ್ ಸಿಕ್ವೇರಾ, ಶರತ್ ನಾಯಕ್, ರಿತೇಶ್, ಅಖಿಲೇಶ್, ಅಕ್ಷಯ್, ಕಿರಣ, ನಿಖಿಲ್ ನಾಯಕ್ ಮೊದಲಾದವರು ಸೇರಿ ಬೆಂಕಿಯನ್ನು ನಂದಿಸಿದರು.
undefined
ಹೊತ್ತಿ ಉರಿಯುತ್ತಿರುವ ಬೆಂಕಿ
undefined
ಬೆಂಕಿ ನಂದಿಸುವ ಕೆಲಸದಲ್ಲಿ ಯುವಕರು ತಲ್ಲೀನರಾಗಿರುವುದು
undefined
click me!