ಪೋಷಕರ ಪ್ರತಿಭಟನೆಯ ಆತಂಕ: ಕಾಲೇಜಿಗೆ ಬೀಗ
ವಿದ್ಯಾರ್ಥಿನಿ ಅನುಮಾನಾಸ್ಪದವಾಗಿ ಮೃತಪಟ್ಟ ಸುದ್ದಿ ಹರಡುತ್ತಿದ್ದಂತೆ ಆಕ್ರೋಶಗೊಂಡ ಪೋಷಕರು ಹಾಗೂ ಸಂಬಂಧಿಕರು ಕಾಲೇಜಿನ ಮುಂದೆ ಜಮಾಯಿಸುವ ಸಾಧ್ಯತೆ ಇತ್ತು. ಯಾವುದೇ ಅಹಿತಕರ ಘಟನೆಗಳು ಅಥವಾ ಪ್ರತಿಭಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಟೀಂ ಅಕಾಡೆಮಿ ಆಡಳಿತ ಮಂಡಳಿಯು ಕಾಲೇಜಿಗೆ ದಿಢೀರ್ ರಜೆ ಘೋಷಿಸಿ, ಗೇಟ್ಗಳಿಗೆ ಬೀಗ ಜಡಿದಿದೆ.
ಆಡಳಿತ ಮಂಡಳಿ ನೀಡಿದ ಸ್ಪಷ್ಟನೆ ಏನು?
ಈ ಗಂಭೀರ ಆರೋಪಗಳ ಕುರಿತು ಪ್ರತಿಕ್ರಿಯಿಸಿರುವ ಟೀಂ ಅಕಾಡೆಮಿ ಕಾಲೇಜಿನ ಅಧ್ಯಕ್ಷ ಕೆ.ಎಂ. ಮಂಜಪ್ಪ ಅವರು, ‘ರಂಜಿತಾ ನಾಲ್ಕು ದಿನಗಳ ಹಿಂದೆಯಷ್ಟೇ ಊರಿಗೆ ಹೋಗಿ ವಾಪಸ್ ಬಂದಿದ್ದಳು. ಬಂದಾಗಿನಿಂದ ಕೊಂಚ ಮೌನವಾಗಿದ್ದಳು ಎಂಬ ಮಾಹಿತಿ ನಮಗೆ ಸಿಕ್ಕಿದೆ. ಘಟನೆಯ ದಿನ ಸಂಜೆ 5:30ಕ್ಕೆ ಹಾಸ್ಟೆಲ್ ಕೊಠಡಿಗೆ ತೆರಳಿದ್ದಳು. ರಾತ್ರಿ 8:30ಕ್ಕೆ ಕೊಠಡಿಯಲ್ಲಿದ್ದ ಇತರ ವಿದ್ಯಾರ್ಥಿನಿಯರು ಬಂದು ನೋಡಿದಾಗ ಒಳಗಿನಿಂದ ಬಾಗಿಲು ತೆರೆದಿರಲಿಲ್ಲ’ ಎಂದು ತಿಳಿಸಿದರು.