ಅಂಬೇಡ್ಕರ್ ಪ್ರತಿಮೆ ಎದುರು ಮದುವೆ: ಸಾಕ್ಷಿಯಾದ ಶಾಸಕ ಬಿ. ಶಿವಣ್ಣ!
ಆನೇಕಲ್ ಪಟ್ಟಣದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಯ ಎದುರು ಎರಡೂ ಮನಸ್ಸುಗಳು ಒಂದಾದವು. ಪ್ರಜಾ ಶಕ್ತಿ ಸಂಘಟನೆಯ ಪದಾಧಿಕಾರಿಗಳು ಹಾಗೂ ಸ್ಥಳೀಯರ ಸಮ್ಮುಖದಲ್ಲಿ ಈ ಅಪರೂಪದ ಮದುವೆ ಸಾಂಗವಾಗಿ ನೆರವೇರಿತು.
ಈ ಅಪರೂಪದ ಹಾಗೂ ಆದರ್ಶ ವಿವಾಹಕ್ಕೆ ಆನೇಕಲ್ ಕ್ಷೇತ್ರದ ಶಾಸಕ ಬಿ. ಶಿವಣ್ಣ ಅವರು ಖುದ್ದಾಗಿ ಆಗಮಿಸಿ, ನವಜೋಡಿಗೆ ಅಕ್ಷತೆ ಹಾಕಿ, ಶುಭ ಹಾರೈಸಿ ಆಶೀರ್ವದಿಸಿದರು. ಇಬ್ಬರು ಮಕ್ಕಳಿರುವ ತಾಯಿಯ ಬಾಳಿಗೆ ಬೆಳಕಾಗಿ ನಿಂತ ಐಟಿ ಉದ್ಯೋಗಿ ಪುರುಷೋತ್ತಮ್ ಅವರ ನಿರ್ಧಾರಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.