ಉರಗ ರಕ್ಷಕ ವಿಶ್ವನಾಥ್ ಅವರು ನೆಲಮಂಗಲ ಪಟ್ಟಣದ ಜನವಸತಿ ಪ್ರದೇಶದಲ್ಲಿದ್ದ 8ಕ್ಕೂ ಅಧಿಕ ನಾಗರಹಾವಿನ ಮರಿಗಳನ್ನು ರಕ್ಷಣೆ ಮಾಡಿದ್ದಾರೆ. ಇದೀಗ ಹಾವಿನ ಮರಿಗಳು ಮೊಟ್ಟೆಯೊಡೆದು ಹೊರಗೆ ಬರುವ ಅವಧಿಯಾಗಿದೆ. ಈ ಸಂದರ್ಭದಲ್ಲಿ ಹಾವಿನ ಮರಿಗಳು ಮನೆಯ ಕಾಂಪೌಂಡ್ ಒಳಗೆ ಬೆಚ್ಚಗಿರುವ ಪ್ರದೇಶಗಳಿಗೆ ಬಂದು ಸೇರಿಕೊಳ್ಳುತ್ತವೆ.
ಮನೆಯ ಮೆಟ್ಟಿಲುಗಳ ಕೆಳಗೆ ಇಟ್ಟಿರುವ ಅನಗತ್ಯ ವಸ್ತುಗಳಿರುವ ಜಾಗ, ಬೈಕ್ಗಳು, ಚಪ್ಪಲಿ ಸ್ಟ್ಯಾಂಡ್ಗಳು ಹಾಗೂ ಮನೆಯ ಹೊರಗೆ ಬಿಟ್ಟಿರುವ ಶೂಗಳಲ್ಲಿ ಹಾವಿನ ಮರಿಗಳು ಹೋಗಿ ಸೇರಿಕೊಳ್ಳುತ್ತವೆ.