10 ಲಕ್ಷ ಸಾಲ, 6 ಬೋರ್ವೆಲ್ ಆದರೂ ಸಿಗದ ನೀರು:
ತೋಟವನ್ನು ಉಳಿಸಿಕೊಳ್ಳಲು ರಾಕೇಶ್ ಪಡಬಾರದ ಕಷ್ಟಪಟ್ಟಿದ್ದಾರೆ. ಸುಮಾರು 10 ಲಕ್ಷ ರೂಪಾಯಿಗೂ ಅಧಿಕ ಹಣ ವ್ಯಯಿಸಿ ಆರು ಬೋರ್ವೆಲ್ಗಳನ್ನು ಕೊರೆಸಿದರೂ ಹನಿ ನೀರು ಸಿಗಲಿಲ್ಲ. ಅತ್ತ ಮಳೆಯೂ ಇಲ್ಲ, ಇತ್ತ ಬೋರ್ವೆಲ್ನಲ್ಲೂ ನೀರಿಲ್ಲದೆ ತೋಟ ಸಂಪೂರ್ಣ ಒಣಗಲು ಆರಂಭಿಸಿತ್ತು. ಮೊದಲೇ ಬ್ಯಾಂಕ್ ಹಾಗೂ ಹೊರಗಡೆ ಸಾಲ ಮಾಡಿಕೊಂಡಿದ್ದ ರೈತ ನೀರಿನ ಸಮಸ್ಯೆಯಿಂದ ಹತಾಶರಾಗಿದ್ದರು. ಕಣ್ಣೆದುರೇ ಒಣಗುತ್ತಿದ್ದ ಗಿಡಗಳನ್ನು ನೋಡಲಾಗದೆ, ಅಂತಿಮವಾಗಿ ಜೆಸಿಬಿ ತರಿಸಿ ಇಡೀ ತೋಟವನ್ನು ನೆಲಸಮ ಮಾಡಿದ್ದಾರೆ.