ಕಾಗದಕ್ಕೆ ಸೀಮಿತವಾದ 'ಸಮಪಾಲು-ಸಮಬಾಳು':
'ಸರ್ಕಾರ ಹೇಳುವ 'ಎಲ್ಲರಿಗೂ ಸಮಪಾಲು, ಸಮಬಾಳು' ಎಂಬ ನೀತಿ ಕೇವಲ ಘೋಷಣೆಗಳಿಗೆ ಮಾತ್ರ ಸೀಮಿತವಾಗಿದೆ. ವಾಸ್ತವದಲ್ಲಿ ಹಿಂದುಳಿದ ಸಮುದಾಯಗಳಿಗೆ ರಾಜಕೀಯ ಪ್ರಾತಿನಿಧ್ಯ ಸಿಗುತ್ತಿಲ್ಲ. ಸಣ್ಣ ಸಮುದಾಯಗಳ ನಿಷ್ಠಾವಂತ ನಾಯಕರನ್ನು ಗುರುತಿಸಿ ಅವರಿಗೆ ಸೂಕ್ತ ಸ್ಥಾನಮಾನ ನೀಡುವಲ್ಲಿ ಸರ್ಕಾರ ವಿಫಲವಾಗಿದೆ' ಎಂದು ಹನುಮಂತಪ್ಪ ಬೇಸರ ವ್ಯಕ್ತಪಡಿಸಿದರು.