ಆಡಳಿತ ಮಂಡಳಿ , ಶಾಸಕರ ವಿರುದ್ಧ ಆಕ್ರೋಶ :
ಕೊಪ್ಪ ಪಟ್ಟಣದ ಜನತೆಗೆ ನೀರುಣಿಸುವ ನೀರು ಮಲಿನಗೊಂಡಿದ್ದು ಸುಮಾರು ಒಂದು ವಾರದಿಂದ ಪಟ್ಟಣಕ್ಕೆ ಗಬ್ಬು ವಾಸನೆಯ ನೀರನ್ನು ಸರಬರಾಜಾಗುತ್ತಿದ್ದು ಹಾಗೂ ಈ ನೀರು ಕುಡಿಯಲು ಯೋಗ್ಯವಲ್ಲ ಎಂಬ ಆರೋಗ್ಯ ಇಲಾಖೆಯ ವರದಿ ಸಾರ್ವಜನಿಕವಾಗಿ ಹರಿದಾಡಿದ್ದು ಅದರ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಇದನ್ನು ಗಮನಿಸಿದ ಅಮ್ಮ ಫೌಂಡೇಷನ್ ಸಂಸ್ಥಾಪಕ ಸುಧಾಕರ ಶೆಟ್ಟಿ ನೀರು ಶುದ್ಧೀಕರಣ ಘಟಕಕ್ಕೆ ಬೇಟಿ ಕೊಟ್ಟು ಪರಿಶೀಲಿಸಿ ವಾಸ್ತವತೆಯನ್ನು ಅರಿತು ಅವೈಜ್ಞಾನಿಕ ನಿರ್ವಹಣೆಯ ವಿರುದ್ಧ ಆಕ್ರೋಶ ಹೊರ ಹಾಕಿದ್ದು ಇಂತಹ ದೊಡ್ಡ ಸಮಸ್ಯೆ ಪಟ್ಟಣದಲ್ಲಿ ನಡೆದಿದ್ದರೂ ಕ್ಷೇತ್ರದ ಶಾಸಕರು ಈ ವಿಚಾರವಾಗಿ ಗಮನಹರಿಸದೇ ಇರುವುದು ನಿಜಕ್ಕೂ ಬೇಸರದ ಸಂಗತಿ ಎಂದರು.
ಸ್ಥಳೀಯ ಶಾಸಕರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಪಟ್ಟಣದಲ್ಲಿನ ಕುಡಿಯುವ ನೀರಿನ ಮಾಲಿನ್ಯವನ್ನು ವಿಚಾರ ವನ್ನು ಗಂಭೀರವಾಗಿ ಪರಿಗಣಿಸಿಲ್ಲ ಈ ವಿಚಾರದಲ್ಲಿ ಅಧಿಕಾರಿಗಳು ಹಾಗೂ ಪಟ್ಟಣ ಪಂಚಾಯಿತಿಯ ಆಡಳಿತ ನಡೆಸುವವರ ನಿರ್ಲಕ್ಷ್ಯ ಹೆಚ್ಚಿದೆ. ಸಾರ್ವಜನಿಕರು ಇಂತಹ ಗಂಭೀರ ವಿಚಾರಗಳನ್ನು ಪ್ರಶ್ನಿಸದಿದ್ದರೆ ಭವಿಷ್ಯ ದಲ್ಲಿ ಭಾರಿ ನಷ್ಟಕ್ಕೆ ನಾವುಗಳೆ ಒಳಗಾಗಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.