ಧರ್ಮಸ್ಥಳ ಸಂಘದಿಂದ ಸಾಲ ಪಡೆದು ತೋಟ ಅಭಿವೃದ್ಧಿ
ಅಶೋಕ್ ಅವರು ಧರ್ಮಸ್ಥಳ ಸಂಘ (Dharmasthala Sangha)ದಿಂದ ಸಾಲ (Loan) ಪಡೆದು ತೋಟವನ್ನು ಅಭಿವೃದ್ಧಿಪಡಿಸಿದ್ದರು. ಆದರೆ ಒಂದೇ ದಿನದ ಪ್ರವಾಹ (Flood) ಅವರ ಹಲವು ವರ್ಷಗಳ ಪರಿಶ್ರಮವನ್ನು ಮಣ್ಣಿನ ಪಾಲು ಮಾಡಿದೆ. ತೋಟದ ಈಗಿನ ಸ್ಥಿತಿಯನ್ನು ಕಂಡು ಅಶೋಕ್ ದಂಪತಿ ಕಣ್ಣೀರಿಟ್ಟಿದ್ದು, ಬದುಕು ಮತ್ತೆ ಹೇಗೆ ಕಟ್ಟಿಕೊಳ್ಳುವುದು ಎಂಬ ಆತಂಕದಲ್ಲಿದ್ದಾರೆ.
ಪ್ರವಾಹದ ನೀರು (Flood Water) ತೋಟಕ್ಕೆ ಮಾತ್ರ ಸೀಮಿತವಾಗದೆ ಮನೆಯೊಳಗೂ ನುಗ್ಗಿದೆ. ಇದರಿಂದ ಮನೆಯಲ್ಲಿದ್ದ ಗೃಹೋಪಯೋಗಿ ವಸ್ತುಗಳು (Household Items), ಅಗತ್ಯ ಸಾಮಗ್ರಿಗಳು ಹಾಗೂ ದೈನಂದಿನ ಬಳಕೆಯ ವಸ್ತುಗಳೂ ಹಾನಿಗೊಳಗಾಗಿವೆ. ಕುಟುಂಬ ಇದೀಗ ತೀವ್ರ ಸಂಕಷ್ಟವನ್ನು ಎದುರಿಸುತ್ತಿದೆ.