Amit Shah: ಅಂದು ಹೈ-ಅಲರ್ಟ್, ಹೈ-ಸೆಕ್ಯುರಿಟಿ! ಹುಬ್ಬಳ್ಳಿಯಿಂದ ಕೇಂದ್ರ ಸಚಿವ ಅಮಿತ್ ಶಾ ಸಂಚಾರ! ಇಲ್ಲಿದೆ ಟೈಮ್ ಟು ಟೈಮ್ ಕಂಪ್ಲೀಟ್ ಶೆಡ್ಯೂಲ್!

Published : Sep 16, 2026, 04:44 PM IST

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 18 ಮತ್ತು 19ರಂದು ಹುಬ್ಬಳ್ಳಿ ಹಾಗೂ ಬೆಳಗಾವಿಗೆ ದಿಢೀರ್ ಭೇಟಿ ನೀಡಲಿದ್ದಾರೆ. ಅವರು ಕೆಎಲ್‌ಇ ಮೆಡಿಕಲ್ ಕಾಲೇಜು ಮತ್ತು ಬೀರೇಶ್ವರ ಕೋ-ಆಪರೇಟಿವ್ ಸೊಸೈಟಿ ಕಟ್ಟಡಗಳನ್ನು ಉದ್ಘಾಟಿಸಲಿದ್ದು, ಈ ಪ್ರವಾಸವು ತೀವ್ರ ರಾಜಕೀಯ ಕುತೂಹಲ ಸೃಷ್ಟಿಸಿದೆ.

PREV
18
ಇರಲಿದೆ ಹೈ ಅಲರ್ಟ್!

ವಾಣಿಜ್ಯ ನಗರಿ ಹುಬ್ಬಳ್ಳಿ ಹಾಗೂ ಗಡಿ ಜಿಲ್ಲೆ ಬೆಳಗಾವಿಯ ಆಯಕಟ್ಟಿನ ಪ್ರದೇಶಗಳು ಈಗ ದಿಢೀರನೆ ಹೈ-ಅಲರ್ಟ್ ವಲಯಗಳಾಗಿ ಬದಲಾಗಿವೆ. ಕೇಂದ್ರ ಗೃಹ ಸಚಿವ, ಭಾರತೀಯ ರಾಜಕೀಯದ 'ಚಾಣಕ್ಯ' ಎಂದೇ ಬಿಂಬಿತರಾಗುವ ಅಮಿತ್ ಶಾ ಅವರ ಈ ಬಾರಿಯ ರಾಜ್ಯ ಪ್ರವಾಸವು ಅತ್ಯಂತ ಕೌತುಕ ಹಾಗೂ ಕುತೂಹಲಕ್ಕೆ ಕಾರಣವಾಗಿದೆ. ದಿಢೀರ್ ನಿಗದಿಯಾಗಿರುವ ಈ ಪ್ರವಾಸದ ವೇಳಾಪಟ್ಟಿ, ಕೇವಲ ನೂತನ ಕಟ್ಟಡಗಳ ಉದ್ಘಾಟನೆಗೆ ಸೀಮಿತವಾಗಿದೆಯೇ ಅಥವಾ ಮುಂಬರುವ ಬೃಹತ್ ರಾಜಕೀಯ ದಂಗೆಗೆ ವೇದಿಕೆ ಸಜ್ಜಾಗುತ್ತಿದೆಯೇ ಎಂಬ ಅನುಮಾನ ರಾಜಕೀಯ ವಲಯದಲ್ಲಿ ದಟ್ಟವಾಗಿದೆ.

28
9:10 ಕ್ಕೆ ಹುಬ್ಬಳ್ಳಿಗೆ ಎಂಟ್ರಿ!

ಸೆಪ್ಟೆಂಬರ್ 18ರ ಸೂರ್ಯ ಮುಳುಗುತ್ತಿದ್ದಂತೆ ಹೆಚ್ಚಲಿದೆ ರಾಜಕೀಯ ಕಾವು. ಅಂದು ಸಂಜೆ ಸರಿಯಾಗಿ 7:30ಕ್ಕೆ ಗುಜರಾತ್‌ನ ಅಹಮದಾಬಾದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಶೇಷ ಸೇನಾ/ವಿಐಪಿ ವಿಮಾನವೊಂದು ಆಗಸಕ್ಕೆ ಹಾರಲಿದೆ. ನಿಗೂಢ ನಡೆಗಳಿಗೆ ಹೆಸರಾಗಿರುವ ಗೃಹ ಸಚಿವರನ್ನು ಹೊತ್ತ ಈ ರಹಸ್ಯ ಪ್ರಯಾಣದ ವಿಮಾನವು ರಾತ್ರಿ 9:10ಕ್ಕೆ ಸರಿಯಾಗಿ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸ್ಪರ್ಶಿಸಲಿದೆ.

38
ಡೆನಿಸನ್ಸ್‌ನಲ್ಲಿ ವಾಸ್ತವ್ಯ!

ಅಲ್ಲಿಂದ ಸೀದಾ ಹುಬ್ಬಳ್ಳಿಯ ಅತ್ಯಂತ ಸುಸಜ್ಜಿತ ಹಾಗೂ ಐಷಾರಾಮಿ ‘ಡೆನಿಸನ್ಸ್’ (Denissons) ಹೋಟೆಲ್‌ಗೆ ತೆರಳಲಿರುವ ಅವರು, ಅಂದು ರಾತ್ರಿ ವಾಸ್ತವ್ಯ ಹೂಡಲಿದ್ದಾರೆ. ಅರ್ಧರಾತ್ರಿಯ ವೇಳೆಯಲ್ಲಿ ಹೋಟೆಲ್ ಆವರಣದಲ್ಲಿ ರಾಜ್ಯದ ಪ್ರಮುಖ ಬಿಜೆಪಿ ನಾಯಕರೊಂದಿಗೆ ಕೌಟುಂಬಿಕ ಅಥವಾ ರಹಸ್ಯ ಸಭೆಗಳು ನಡೆಯಲಿವೆಯೇ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ. ನಾಯಕರ ನಡೆ-ನುಡಿಗಳ ಮೇಲೆ ಹೈಕಮಾಂಡ್ ಹದ್ದುಗಣ್ಣು ಇರಿಸಿರುವ ಈ ಸಮಯದಲ್ಲಿ ಹುಬ್ಬಳ್ಳಿಯ ಹೋಟೆಲ್ ವಾಸ್ತವ್ಯಕ್ಕೆ ಭಾರಿ ಪ್ರಾಮುಖ್ಯತೆ ಲಭಿಸಿದೆ.

48
ಸೆಪ್ಟೆಂಬರ್ 19?

ಬೆಳಿಗ್ಗೆ 11:15; ಡೆನಿಸನ್ಸ್ ಹೋಟೆಲ್‌ನಿಂದ ಅಮಿತ್ ಶಾ ಅವರ ಕಾನ್ವಾಯ್ ಹೊರಡಲಿದೆ.

ಬೆಳಿಗ್ಗೆ 11:25; ಕೆಎಲ್‌ಇ ಸಂಸ್ಥೆಯ ಅತ್ಯಾಧುನಿಕ ಜಿಜಿಎಂಎಂ (KLE JGMM) ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಆವರಣಕ್ಕೆ ಆಗಮನ.

ಬೆಳಿಗ್ಗೆ 11:30 ರಿಂದ ಮಧ್ಯಾಹ್ನ 1:00; ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳನ್ನೊಳಗೊಂಡ ನೂತನ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಕಟ್ಟಡದ ಭವ್ಯ ಉದ್ಘಾಟನಾ ಸಮಾರಂಭ.

ಮಧ್ಯಾಹ್ನ 1;00 ರಿಂದ 1:40; ಪ್ರಮುಖ ಗಣ್ಯರೊಂದಿಗೆ ಅಧಿಕೃತ ಭೋಜನ ಕೂಟ.

58
ಕೊಲ್ಹಾಪುರಕ್ಕೂ ಭೇಟಿ!

ಆದರೆ, ಕಥೆ ಇಲ್ಲಿಗೆ ಮುಗಿಯುವುದಿಲ್ಲ. ಮಧ್ಯಾಹ್ನ 1:55ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣ ತಲುಪಲಿರುವ ಗೃಹ ಸಚಿವರು, ಅಲ್ಲಿಂದ ನೇರವಾಗಿ ಹೆಲಿಕಾಪ್ಟರ್ ಏರಿ ಮಹಾರಾಷ್ಟ್ರದ ಗಡಿ ಭಾಗವಾದ ಕೊಲ್ಹಾಪುರಕ್ಕೆ ಹಾರಲಿದ್ದಾರೆ. ಮಹಾರಾಷ್ಟ್ರದ ಗಡಿ ತಲುಪಿ, ಅಲ್ಲಿಂದ ಮರಳಿ ಹೆಲಿಕಾಪ್ಟರ್ ಮೂಲಕವೇ ಗಡಿ ಜಿಲ್ಲೆಯಾದ ಚಿಕ್ಕೋಡಿ ತಾಲೂಕಿನ ಎಕ್ಸಂಬಾ ಗ್ರಾಮಕ್ಕೆ ಪಾದಾರ್ಪಣೆ ಮಾಡಲಿದ್ದಾರೆ.

68
ನೂತನ ಕಚೇರಿ ಉದ್ಘಾಟನೆ!

ಸಂಜೆ 3:05 ರಿಂದ 4:35 ರವರೆಗೆ ಎಕ್ಸಂಬಾದಲ್ಲಿ ನಡೆಯಲಿರುವ ಶ್ರೀ ಬೀರೇಶ್ವರ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿಯ ನೂತನ ಮುಖ್ಯ ಕಚೇರಿ ಕಟ್ಟಡದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅಮಿತ್ ಶಾ ಭಾಗವಹಿಸಲಿದ್ದಾರೆ. ಸಹಕಾರ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲು ಸ್ಥಾಪಿಸಿರುವ ಈ ಸೊಸೈಟಿಯ ವೇದಿಕೆಯಿಂದ ಶಾ ನೀಡಲಿರುವ ಸಂದೇಶವೇನು ಎಂಬುದು ಈಗ ತೀವ್ರ ಕುತೂಹಲ ಕೆರಳಿಸಿದೆ.

78
ಸಂಚಲನವನ್ನೇ ಸೃಷ್ಟಿಸಿದ ಶಾ ಪ್ರವಾಸ!

ಉತ್ತರ ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿ ಭಾಗದಲ್ಲಿ ಗೃಹ ಸಚಿವರ ಈ 'ಮಿನಂಚಿನ ಪ್ರವಾಸ' ರಾಜಕೀಯ ವಲಯದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ. ಪ್ರವಾಸದ ಹಿನ್ನೆಲೆಯಲ್ಲಿ ಹುಬ್ಬಳ್ಳಿ ನಗರ ಹಾಗೂ ಬೆಳಗಾವಿ ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಭದ್ರತೆಯನ್ನು ಕೈಗೊಳ್ಳಲಾಗಿದೆ. ವಿಮಾನ ನಿಲ್ದಾಣ, ಹೋಟೆಲ್ ಮತ್ತು ಕಾರ್ಯಕ್ರಮ ನಡೆಯುವ ಸ್ಥಳಗಳಲ್ಲಿ ಸಶಸ್ತ್ರ ಪಡೆಗಳನ್ನು ನಿಯೋಜಿಸಲಾಗಿದೆ.

88
ಕಾರ್ಯಕರ್ತರಲ್ಲಿ ಹೊಸ ಚೈತನ್ಯ!

ಒಂದೆಡೆ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರಲ್ಲಿ ಹೊಸ ಚೈತನ್ಯ ಮೂಡಿದ್ದರೆ, ಇನ್ನೊಂದೆಡೆ ಎದುರಾಳಿ ಪಾಳೆಯದಲ್ಲಿ ಅಮಿತ್ ಶಾ ಅವರ ಪ್ರತಿಯೊಂದು ನಡೆಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಕೇವಲ ಉದ್ಘಾಟನೆಗಳೋ ಅಥವಾ ಗಡಿ ಭಾಗದ ರಾಜಕೀಯ ಚಿತ್ರಣವನ್ನೇ ಬದಲಿಸುವ ಬಿರುಗಾಳಿಯೋ? ಕಾಲವೇ ಉತ್ತರಿಸಬೇಕಿದೆ.

Read more Photos on
click me!

Recommended Stories