ಜಿ.ಪಂ ಸಿಇಓ ಆದ 16ರ ವರ್ಷಾ.. ಅಧಿಕಾರಿಗಳಿಗೆ ಖಡಕ್ ಸೂಚನೆ

First Published Jan 30, 2021, 10:41 PM IST

ಉಡುಪಿ ಜಿಲ್ಲಾ ಪಂಚಾಯಿತಿನಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬದಲಾಗಿದ್ದರು. ಬ್ರಹ್ಮಾವರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ವರ್ಷಾ ಅವರು ಜಿಪಂ ಸಿಓಇ ಕುರ್ಚಿಯಲ್ಲಿ ಕುಳಿತು, ತಮ್ಮೇದುರು ಕುಳಿತ್ತಿದ್ದ ಸ್ವತಃ ಜಿಪಂ ಸಿಇಓ ಡಾ.ನವೀನ್ ಭಟ್ ಅವರನ್ನು ಪ್ರಶ್ನಿಸಿ ವಿವರಗಳನ್ನು ಪಡೆದುಕೊಂಡರು.

ಶನಿವಾರ ಉಡುಪಿ ಜಿ.ಪಂ.ನಲ್ಲಿ ಸುಮಾರು 30 ನಿಮಿಷಗಳ ಕಾಲ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬದಲಾಗಿದ್ದರು. ಬ್ರಹ್ಮಾವರದ ಸರ್ಕಾರಿ ಪಪೂ ಕಾಲೇಜಿನ ವಿದ್ಯಾರ್ಥಿನಿ ವರ್ಷಾ ಅವರು ಜಿಪಂ ಸಿಓಇ ಕುರ್ಚಿಯಲ್ಲಿ ಕುಳಿತು, ತಮ್ಮೇದುರು ಕುಳಿದ ಸ್ವತಃ ಜಿಪಂ ಸಿಇಓ ಡಾ.ನವೀನ್ ಭಟ್ ಅವರನ್ನು ಪ್ರಶ್ನಿಸಿ ವಿವರಗಳನ್ನು ಪಡೆದುಕೊಂಡರು.
undefined
ಉಡುಪಿ ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವರ್ಷಾ ಅವರು ಜಿಲ್ಲೆಯಲ್ಲಿ ಪ್ಲಾಸ್ಟಿಕ್ ವಿಲೇವಾರಿಗೆ, ಗ್ರಾಮಗಳಲ್ಲಿ ಚರಂಡಿ ವ್ಯವಸ್ಥೆಗೆ ಹಾಗೂ ನಿರುದ್ಯೋಗ ನಿವಾರಣೆಗೆ ಏನೇನು ಕ್ರಮ ಕೈಗೊಳ್ಳಬೇಕು ಎಂದು ಜಿಪಂ ಅಧಿಕಾರಿಗಳಿಗೆ ಸೂಚನೆ ನೀಡಿದರು.
undefined
ಶನಿವಾರ ಜಿಪಂ ಸಭಾಂಗಣಧಲ್ಲಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯನ್ನು ನಡೆಸಲಾಯಿತು. ಇದರಲ್ಲಿ ಜಿಲ್ಲೆಯ ಪ್ರತಿಭಾನ್ವಿತ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
undefined
ಈ ಕಾರ್ಯಕ್ರಮದಲ್ಲಿ ಉತ್ತಮ ಹಾಗೂ ಸಾಮಾಜಿಕ ಕಳಕಳಿಯುಳ್ಳ ಹಲವು ಪ್ರಶ್ನೆಗಳನ್ನು ಕೇಳಿದ ಬ್ರಹ್ಮಾವರ ಸರ್ಕಾರಿ ಪಪೂ ಕಾಲೇಜಿನ ವಿದ್ಯಾರ್ಥಿನಿ ಕುಮಾರಿ ವರ್ಷಾ ಅವರಿಗೆ ಸಿಓಇ ಡಾ.ನವೀನ್ ಭಟ್ ಅವರು ಅರ್ಧ ಗಂಟೆ ಕಾಲ ತಮ್ಮ ಹುದ್ದೆಯನ್ನು ಅಲಂಕರಿಸಲು ಬಿಟ್ಟುಕೊಟ್ಟು, ಆಕೆಯನ್ನು ತಮ್ಮ ಕುರ್ಚಿಯ ಮೇಲೆ ಕೂಡಿಸಿ, ನೀವು ಈಗ ಸಮಾಜ ಸುಧಾರಣೆಗೆ ಏನು ಸಲಹೆ ನೀಡುತ್ತೀರಿ ಎಂದು ಪ್ರಸ್ನಿಸಿದರು.
undefined
ಅದಕ್ಕೆ ವರ್ಷಾ ಅವರು ಜಿಲ್ಲೆಯಲ್ಲಿ ಪ್ಲಾಸ್ಟಿಕ್ ವಿಲೇವಾರಿ, ಗ್ರಾಮಗಳಲ್ಲಿ ಚರಂಡಿ ವ್ಯವಸ್ಥೆ ಹಾಗೂ ನಿರುದ್ಯೋಗ ನಿವಾರಣೆ ಕುರಿತು ಚರ್ಚಿಸಿದಳು.
undefined
16ರ ಅಕೆ ಎಸ್.ಎಸ್.ಎಲ್.ಸಿ. ಓದುತ್ತಿದ್ದು, ಅವಳಿಗೆ ನೀನು ಐ.ಎ.ಎಸ್. ಪಾಸಾಗಿ ಇದೇ ಹುದ್ದೆಯಲ್ಲಿ ಇರಬೇಕು ಎಂದು ಡಾ.ನವೀನ್ ಭಟ್ ಹಾರೈಸಿದರು.
undefined
click me!