ಮೊದಲ ಇನ್ನಿಂಗ್ಸ್ ಬಳಿಕ, ಸುಯಶ್ ಮಾತನಾಡುತ್ತಾ, “ಯಾವ ಬ್ಯಾಟ್ಸ್ಮನ್ಗಳೂ ನಮ್ಮ ಗೂಗ್ಲಿಗಳನ್ನು ಅರ್ಥ ಮಾಡಿಕೊಳ್ಳಲು ಆಗೋದಿಲ್ಲ. ನಮ್ಮ ಕೋಚ್ನ ಯೋಜನೆ ಈಗ ಕಾರ್ಯರೂಪಕ್ಕೆ ಬಂದಿದೆ. ಇಂದು ಬೌಲಿಂಗ್ ಮಾಡುವಾಗ ತುಂಬಾ ಚೆನ್ನಾಗಿತ್ತು ಎನ್ನುವ ಭಾವನೆ ಬಂತು. ಯಾರೂ ನನ್ನ ಗೂಗ್ಲಿಗಳನ್ನು ಅರ್ಥ ಮಾಡಿಕೊಳ್ಳಲು ಆಗಲಿಲ್ಲ, ಇದು ನನ್ನ ಅನಿಸಿಕೆ. ನಾವು ಇದನ್ನು ಸಾಮಾನ್ಯ ಪಂದ್ಯ ಎನ್ನುವಂತೆ ಪರಿಗಣಿಸಿದೆವು, ಸೆಮಿಫೈನಲ್ ಆಗಿ ಎಂದಿಗೂ ಭಾವಿಸಿರಲಿಲ್ಲ. ನಾನು ನನ್ನ ಬೌಲಿಂಗ್ ಚೆನ್ನಾಗಿ ಆಗಲಿ ಎಂದು ತುಂಬ ಕಷ್ಟಪಟ್ಟಿದ್ದೇನೆ. ಆರ್ಸಿಬಿ ತಂಡದ ಜನವನ್ನು ಈಗ ಸಂಭ್ರಮಿಸೋದಿಲ್ಲ, ಜೂನ್ 13ಕ್ಕೆ ಆಚರಿಸ್ತೀವಿ" ಎಂದು ಅವರು ಹೇಳಿದರು.