ಮಹಾತ್ಮಾ ಗಾಂಧಿ ದಾಂಡಿ ಉಪ್ಪಿನ ಯಾತ್ರೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹತ್ವದ ತಿರುವು ನೀಡಿದ ಆಂದೋಲನವಾಗಿದೆ. ದಾಂಡಿ ಯಾತ್ರೆ ಆರಂಭಕ್ಕೂ ಮೊದಲು ಗಾಂಧಿ ದಾಂಡಿಯಲ್ಲಿರುವ ದಾವುದಿ ಬೋಹ್ರಾ ಸಮುದಾಯದ ಸೈಯದ್ ಸಾಬ್ ಮನೆಯಲ್ಲಿ ಉಳಿದುಕೊಂಡಿದ್ದರು. ನಾನು ಗುಜರಾತ್ ಮುಖ್ಯಮಂತ್ರಿಯಾದ ಬಳಿಕ ದಾವುದಿ ಸಮುದಾಯದ ಸೈಯದ್ ಸಾಬ್ ಅವರಲ್ಲಿ ಮನವಿ ಮಾಡಿದೆ. ನನಗೆ ಮರುಮಾತಿಲ್ಲದೇ ಈ ಮನೆ ಕೊಟ್ಟಿದ್ದಾರೆ. ಈಗ ನೀವು ದಾಂಡಿಗೆ ತೆರಳಿ ನೋಡಿ, ಅತೀ ದೊಡ್ಡ ಸ್ಮಾರಕ ನಿರ್ಮಾಣವಾಗಿದೆ ಎಂದು ಮೋದಿ ಹೇಳಿದರು.