'ಬುದ್ಧಂ ಶರಣಂ ಗಚ್ಛಾಮಿ' ಬೌದ್ಧ ಧರ್ಮದ ವಸ್ತು ಪ್ರದರ್ಶನ ಉದ್ಘಾಟನೆ

Published : May 11, 2023, 06:50 PM IST

ಕೇಂದ್ರ ವಿದೇಶಾಂಗ ವ್ಯವಹಾರ ಮತ್ತು ಸಂಸ್ಕೃತಿ ರಾಜ್ಯ ಸಚಿವೆ ಶ್ರೀಮತಿ ಮೀನಾಕ್ಷಿ ಲೇಖಿ ಅವರು ಹಿರಿಯ ಬೌದ್ಧ ಸನ್ಯಾಸಿಗಳ ಸಮ್ಮುಖದಲ್ಲಿ 'ಬುದ್ಧಂ ಶರಣಂ ಗಚ್ಛಾಮಿ' ಪ್ರದರ್ಶನವನ್ನು ಉದ್ಘಾಟಿಸಿದರು. 

PREV
14
'ಬುದ್ಧಂ ಶರಣಂ ಗಚ್ಛಾಮಿ' ಬೌದ್ಧ ಧರ್ಮದ ವಸ್ತು ಪ್ರದರ್ಶನ ಉದ್ಘಾಟನೆ

ಮೇ 10, 2023 ರಂದು ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ಸ್, ನವದೆಹಲಿಯಲ್ಲಿ ನಡೆದ ಸಮಾರಂಭ. ರಾಯಭಾರಿಗಳು, ರಾಜತಾಂತ್ರಿಕರು ಮತ್ತು ಸಚಿವಾಲಯದ ಅಧಿಕಾರಿಗಳು ಹಾಗೂ ಅಂತಾರಾಷ್ಟ್ರೀಯ ಬೌದ್ಧ ಒಕ್ಕೂಟವೂ ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿತ್ತು.

24

ಬುದ್ಧ ಪೂರ್ಣಿಮೆಯ ನಂತರದ ವಾರದಲ್ಲಿ ಆಯೋಜಿಸಲಾದ ಪ್ರದರ್ಶನವು ಭಗವಾನ್ ಬುದ್ಧನ ಜೀವನವನ್ನು ಆಧರಿಸಿದೆ. ಈ ಕಾರ್ಯಕ್ರಮ ಪ್ರಪಂಚದಾದ್ಯಂತ ಬೌದ್ಧ ಕಲೆ ಮತ್ತು ಸಂಸ್ಕೃತಿಯ ವಿಸ್ತಾರ ಪ್ರಪಂಚವನ್ನು ಪ್ರದರ್ಶಿಸಿತು.

34

ಹಿರಿಯ ಬೌದ್ಧ ಸನ್ಯಾಸಿಗಳ ಮಂತ್ರಘೋಷಗಳ ನಡುವೆ ದೀಪ ಬೆಳಗಿಸಿ ಅಂಗವಸ್ತ್ರದ ಪ್ರದಾನದೊಂದಿಗೆ ಪ್ರದರ್ಶನ ಆರಂಭವಾಯಿತು. ಅದರ ನಂತರ ಕವಿತಾ ದ್ವಿಬೀದಿ ಮತ್ತು ಅವರ ತಂಡದಿಂದ ಒಡಿಸ್ಸಿ ನೃತ್ಯ ಶೈಲಿಯಲ್ಲಿ ಪ್ರಸ್ತುತಪಡಿಸಲಾದ ನಿರ್ವಾಣದ ಸ್ತ್ರೀಲಿಂಗ ವೈಭವವನ್ನು ಪ್ರದರ್ಶಿಸುವ "ಶ್ವೇತಾ ಮುಕ್ತಿ" ಪ್ರದರ್ಶನವು ನಡೆಯಿತು.

44

ಸಭೆಯನ್ನುದ್ದೇಶಿಸಿ ಮಾತನಾಡುತ್ತಾ, ಗೌರವಾನ್ವಿತ ಕುಂಡೆಲಿಂಗ್ ರಿಂಪೋಚೆ ಬುದ್ಧನ ಬೋಧನೆಗಳಲ್ಲಿ ಕರುಣೆಯ ಪ್ರಸ್ತುತತೆ ಮತ್ತು ಪ್ರಾಮುಖ್ಯತೆಯನ್ನು ಒತ್ತಿಹೇಳಿದರು ಮತ್ತು ಪ್ರತಿಯೊಬ್ಬರೂ ತಮ್ಮ ದೈನಂದಿನ ಜೀವನದಲ್ಲಿ kru ಅಭ್ಯಾಸ ಮಾಡಲು ಒತ್ತಾಯಿಸಿದರು

click me!

Recommended Stories