ಭಾನುವಾರ ಉದ್ಘಾಟನೆಯಾದ ನೂತನ ಸಂಸತ್ ಭವನದ ಪೂಜಾ ವಿಧಿಗಳನ್ನು ಶೃಂಗೇರಿ ಶಾರದಾ ಮಠದ ಹಲವು ಪುರೋಹಿತರು ನಡೆಸಿಕೊಟ್ಟಿದ್ದಾರೆ. ಶನಿವಾರ ಸಂಸತ್ ಭವನದಲ್ಲಿ ವಾಸ್ತು ಹೋಮ ಪೂಜೆ ನೆರವೇರಿಸಲಾಗಿದ್ದು ಭಾನುವಾರ ಗಣಪತಿ ಹೋಮ ಸೇರಿದಂತೆ ವಿವಿಧ ಪೂಜಾ ಕಾರ್ಯಕ್ರಮಗಳನ್ನು ಸೀತಾರಾಮ ಶರ್ಮಾ, ಶ್ರೀರಾಮ ಶರ್ಮ, ಲಕ್ಷ್ಮೇಶ ತಂತ್ರಿ, ನಾಗರಾಜ ಅಡಿಗ, ಋುಷ್ಯಶೃಂಗ ಭಟ್ಟರು ಪಾಲ್ಗೊಂಡಿದ್ರು.