ಸೂರ್ಯ ಗ್ರಹಣ ಮೋಕ್ಷ ಬಳಿಕ ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠದಲ್ಲಿ 4 ವಿಶೇಷ ಹೋಮ

First Published Jun 21, 2020, 8:20 PM IST

ಸೂರ್ಯಗ್ರಹಣ ಭಾರತದಲ್ಲಿ ಪೂರ್ಣವಾಗಿ ಗೋಚರಿಸದಿದ್ದರೂ, ಇದರ ಪ್ರಭಾವ ಮಾತ್ರ ಸಂಪೂರ್ಣವಾಗಿ ಆವರಿಸಿಕೊಂಡಿತ್ತು ಎನ್ನಬಹುದು. ದೇವಸ್ಥಾನಗಳಲ್ಲಿ ಭಕ್ತರಿಗೆ ಪ್ರವೇಶ ನಿರಾಕರಿಸಲಾಗಿತ್ತು. ಅಲ್ಲದೇ ಖಂಡಗ್ರಾಸ ಸೂರ್ಯ ಗ್ರಹಣ ಹಿನ್ನೆಲೆಯಲ್ಲಿ ಮಂತ್ರಾಲಯ ಮಠದಲ್ಲಿ ವಿಶೇಷ ಹೋಮಗಳು ನಡೆದವು. ಕೊರೊನಾ ವೈರಸ್ ಭೀತಿಯಿಂದಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು ಹೋಮಗಳು ನಡೆಸಲಾಯ್ತು.

ಖಂಡಗ್ರಾಸ ಸೂರ್ಯ ಗ್ರಹಣ ಹಿನ್ನೆಲೆಯಲ್ಲಿ ಮಂತ್ರಾಲಯ ಮಠದಲ್ಲಿ ವಿಶೇಷ ಹೋಮಗಳು ನಡೆದವು.
undefined
ಕೊರೋನಾ ವೈರಸ್ ಭೀತಿಯಿಂದಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು ಹೋಮಗಳು ನಡೆಸಲಾಯ್ತು.
undefined
ಮಠದ ಪೀಠಾಧಿಪತಿಗಳಾದ ಶ್ರೀ ಸುಭುದೇಂದ್ರ ತೀರ್ಥರ ನೇತೃತ್ವದಲ್ಲಿ ನವಗ್ರಹ ಹೋಮ,ನರಸಿಂಹ ಹೋಮ, ಗಾಯತ್ರಿ ಹೋಮ, ವ್ಯಾಹುತಿ ಹೋಮ ನಡೆಯಿತು.
undefined
ಗ್ರಹಣ ಮೋಕ್ಷದ ಬಳಿಕ ಶ್ರೀಮಠದ ಸ್ವಚ್ಚತಾ ಕಾರ್ಯದ ಬಳಿಕ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥರು ರಾಯರ ಬೃಂದಾವನಕ್ಕೆ ವಿಶೇಷ ಪೂಜೆ ಸಲ್ಲಿಸಿದರು.
undefined
ಹೋಮದಲ್ಲಿ ಶ್ರೀ ಮಠದ ಸಿಬ್ಬಂದಿ ಮಾತ್ರ ಭಾಗಿಯಾಗಿದ್ರು.
undefined
ಕೊರೋನಾ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಹೋಮಗಳನ್ನ ಮಾಡಿರುವುದು ವಿಶೇಷವಾಗಿತ್ತು
undefined
click me!