ಬೆಂಗಳೂರು ಮಹಾ ನಗರದಲ್ಲಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೇರಿದಂತೆ ಪ್ರಮುಖ ಮೂರು ನಿಲ್ದಾಣಗಳು ಸದಾ ಪ್ರಯಾಣಿಕರಿಂದ ತುಂಬಿರುತ್ತದೆ. ಸಾಮಾನ್ಯ ದಿನದಲ್ಲಿ ಕೌಂಟರ್ಗೆ ತೆರಳಿ ಟಿಕೆಟ್ ಖರೀದಿಸಲು ಸಾಹಸ ಮಾಡಬೇಕು. ಇನ್ನು ಹಬ್ಬ,ರಜಾ ದಿನಗಳು ಅಂದರೆ ಕೇಳವುದೇ ಬೇಡ. ಟಿಕೆಟ್ ಖರೀದಿಗೆ ಕ್ಯೂ ನಿಲ್ಲಬೇಕು, ನೂಕು ನುಗ್ಗಲಿನ ಜೊತೆಗೆ ಹಲವು ಗಂಟೆಗಳ ಕಾಲ ಕ್ಯೂ ನಿಂತು ಟಿಕೆಟ್ ಖರೀದಿಸುವ ಅನಿವಾರ್ಯತೆ ಇತ್ತು.ಆದರೆ ಇದೀಗ ಸೌತ್ ವೆಸ್ಟರ್ನ್ ರೈಲ್ವೇ ಹೊಸ ರೈಲು ಟಿಕೆಟ್ ವಿಧಾನ ಜಾರಿಗೊಳಿಸಿದೆ. ಇಲ್ಲಿ ಪ್ರಯಾಣಿಕರು ಕ್ಯೂ ನಿಲ್ಲಬೇಕಿಲ್ಲ. ಪ್ರಯಾಣಿಕರು ಎಲ್ಲಿ ನಿಂತಿದ್ದಾರೋ ಅಲ್ಲೆ ಟಿಕೆಟ್ ಪಡೆಯಲು ಸಾಧ್ಯವಿದೆ.