ಆಪರೇಷನ್ ಸಿಂದೂರ ನಡೆದ ಹಿನ್ನೆಲೆಯಲ್ಲಿ ಮೇ 7, 2025ರಂದು ಬೆಳಿಗ್ಗೆ 10:42ರಿಂದ ಸಂಜೆ 6:27ರವರೆಗೆ ನಾಲ್ವರು ಈ ಹೆಸರನ್ನು ರಿಜಿಸ್ಟ್ರೇಷನ್ ಮಾಡಿಕೊಳ್ಳಲು ಅರ್ಜಿ ಸಲ್ಲಿಸಿದ್ದರು. ಅವರೆಂದರೆ ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಕಂಪನಿ, ಮುಂಬೈ ನಿವಾಸಿ ಮುಖೇಶ್ ಚೆತ್ರಮ್ ಅಗರವಾಲ್, ನಿವೃತ್ತ ವಾಯುಪಡೆ ಅಧಿಕಾರಿ – ಗ್ರೂಪ್ ಕ್ಯಾಪ್ಟನ್ ಕಮಲ್ ಸಿಂಗ್ ಒಬೆರ್ಹ್ ಮತ್ತು ದೆಹಲಿ ಮೂಲದ ವಕೀಲ ಅಲೋಕ್ ಕೊಠಾರಿ. ಇವರು ಅರ್ಜಿ ಸಲ್ಲಿಸಿದ್ದ ವರ್ಗ “ನೈಸ್ ವರ್ಗ 41”, ಇದರಲ್ಲಿ ಶಿಕ್ಷಣ, ಚಲನಚಿತ್ರ, ಮಾಧ್ಯಮ ನಿರ್ಮಾಣ, ಕಾರ್ಯಕ್ರಮಗಳು, ಡಿಜಿಟಲ್ ಮಾಧ್ಯಮ, ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳು ಈ ಸೇವೆಗಳು ಒಳಗೊಂಡಿರುತ್ತವೆ ಈ ವರ್ಗ ಸಾಮಾನ್ಯವಾಗಿ ಸಿನಿಮಾ ಸಂಸ್ಥೆಗಳು, ಟಿವಿ ಚಾನೆಲ್ಗಳು ಮತ್ತು ಓಟಿಟಿ ಪ್ಲಾಟ್ಫಾರ್ಮ್ಗಳಿಗೆ ಸಂಬಂಧಿಸಿದೆ. ಆದ್ದರಿಂದ “ಆಪರೇಷನ್ ಸಿಂದೂರ್” ಒಂದು ಸಿನಿಮಾ, ವೆಬ್ಸೀರಿಸ್ ಅಥವಾ ಡಾಕ್ಯುಮೆಂಟರಿ ಆಗಬಹುದೆಂಬ ಊಹೆ ವ್ಯಕ್ತವಾಗಿದೆ. ಜೊತೆಗೆ ಇಂತಹ ಸಮಯದಲ್ಲಿ ಕೂಡ ಈ ಸ್ವಾರ್ಥ ಏಕೆ ಎಂಬ ಟೀಕೆ, ವಿರೋಧ ವ್ಯಕ್ತವಾಗಿತ್ತು.